ADVERTISEMENT

ಹುಬ್ಬಳ್ಳಿ | ಕೊರೊನಾ ಪಿಡುಗು: ಸಂತ್ರಸ್ತರ ನೆರವಿಗೆ ಮುಂದೆ ಬರುವ ದಾನಿಗಳ ನೋಂದಣಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 12:43 IST
Last Updated 25 ಮಾರ್ಚ್ 2020, 12:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಹುಬ್ಬಳ್ಳಿ:ಕೊರೊನಾ ವೈರಸ್ ನಿರ್ಮೂಲನೆಗಾಗಿ ದೇಶದಲ್ಲಿ ವಿಧಿಸಿರುವ 21 ದಿನಗಳ ಲಾಕ್‌ಡೌನ್ ವೇಳೆ ಸಹಾಯದ ಅಗತ್ಯ ಇರುವವರಿಗೆ ನೆರವಾಗಲು ಇಚ್ಛಿಸುವ ಸ್ವಯಂ ಸೇವಾ ಸಂಸ್ಥೆಗಳು ಮತ್ತು ದಾನಿಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬಹುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದಾನಿಗಳು ಆಹಾರ, ಬಟ್ಟೆ, ಮಾಸ್ಕ್, ಸ್ಯಾನಿಟೈಸರ್, ತರಕಾರಿ, ಹಣ್ಣು ನೀಡಬಹುದಾಗಿದೆ. ಶ್ರಮದಾನಕ್ಕೂ ಅವಕಾಶವಿದೆ.

ಆಸಕ್ತರು ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ನೆರವು ನೀಡಬಹುದಾದ ವಸ್ತುಗಳು ಅಥವಾ ಸ್ವಯಂಸೇವೆಯ ವಿವರಗಳನ್ನು ನಿಗದಿತ ನೋಂದಣಿ ನಮೂನೆಯಲ್ಲಿ ಭರ್ತಿ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬಹುದು.

ADVERTISEMENT

ಹೆಚ್ಚಿನ ವಿವರಗಳಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರನ್ನು(ಮೊ 94800 042112) ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.