ADVERTISEMENT

ಧಾರವಾಡ: ಹೆಸರು ಬೆಳೆಗೆ ಹಳದಿ ಚುಕ್ಕೆ ರೋಗ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 4:04 IST
Last Updated 26 ಜೂನ್ 2022, 4:04 IST
ಹಳದಿ ಚುಕ್ಕೆ ರೋಗಬಾಧೆಗೆ ಒಳಗಾಗಿರುವ ಉದ್ದು ಬೆಳೆ
ಹಳದಿ ಚುಕ್ಕೆ ರೋಗಬಾಧೆಗೆ ಒಳಗಾಗಿರುವ ಉದ್ದು ಬೆಳೆ   

ನವಲಗುಂದ: ತಾಲ್ಲೂಕಿನ ಗುಡಿಸಾಗರ, ನಾಗನೂರ, ಸೋಟಕನಾಳ, ಕಡದಳ್ಳಿ, ಅರಟ್ಟಿ, ತಡಹಾಳ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ವ್ಯಾಪ್ತಿಯಲ್ಲಿ ಹೆಸರು ಮತ್ತು ಉದ್ದು ಬೆಳೆಗೆ ಹಳದಿ ಚುಕ್ಕಿ ರೋಗ ಕಾಣಿಸಿಕೊಂಡಿದ್ದು, ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ.

ಒಂದು ತಿಂಗಳ ಬೆಳೆ ಸಮೃದ್ಧವಾಗಿ ಬೆಳೆದಿದೆ. ಆದರೆ ಮಳೆ ಪ್ರಮಾಣ ಜಾಸ್ತಿಯಾಗಿರುವುದರಿಂದ ಮಣ್ಣಿನ ತೇವಾಂಶ ಹೆಚ್ಚಾಗಿ ಹೆಸರು– ಉದ್ದು ಬೆಳೆಗಳು ಹಾಳಾಗುತ್ತಿವೆ ಎಂದು ನವಲಗುಂದದ ರೈತ ಮಹೇಶ ಹಳ್ಳದ ಆತಂಕ ವ್ಯಕ್ತಪಡಿಸಿದರು.

ಬೆಳೆಗಳನ್ನು ಉಳಿಸಿಕೊಳ್ಳಲು ಕೃಷಿ ಇಲಾಖೆ ಮಾರ್ಗಸೂಚಿಯನ್ನು ಕೂಡಲೇ ತಿಳಿಸಬೇಕು. ಗ್ರಾಮೀಣ ಭಾಗಗಳಲ್ಲಿ ಈ ಕುರಿತು ವ್ಯಾಪಕ ಪ್ರಚಾರ ನಡೆಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ADVERTISEMENT

ಪ್ರಾರಂಭಿಕ ಹಂತದಲ್ಲಿ ಯಲೋವ ಮೆಸಾಯಿಕ ವೈರಸ್ ಕಾಣಿಸಿಕೊಂಡು ಸಸಿಗಳು ಹಳದಿ ಬಣ್ಣಕ್ಕೆ ತಿರುಗಿವೆ. ಈ ಬಗ್ಗೆ ಸಲಹೆ– ಸೂಚನೆ ಪಡೆಯಲು ರೈತರು ತಾಲ್ಲೂಕು ಕೃಷಿ ಉಪನಿರ್ದೇಶಕರ ಕಚೇರಿ ಸಂಪರ್ಕಿಸಲು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.