ADVERTISEMENT

ಅರ್ಧಕ್ಕೆ ನಿಂತ ಕಾಮಗಾರಿ; ಪರದಾಟ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 11:06 IST
Last Updated 29 ಏಪ್ರಿಲ್ 2018, 11:06 IST
ಗಜೇಂದ್ರಗಡ ಜೋಡು ರಸ್ತೆಯಲ್ಲಿ ಸಿ.ಸಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ಗಜೇಂದ್ರಗಡ ಜೋಡು ರಸ್ತೆಯಲ್ಲಿ ಸಿ.ಸಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ಗಜೇಂದ್ರಗಡ: ಪಟ್ಟಣದ ಆಯಕಟ್ಟಿನ ಸ್ಥಳವಾದ ಕಾಲಕಾಲೇಶ್ವರ ವೃತ್ತದಿಂದ ಟಿಟಿಡಿ ಕಲ್ಯಾಣ ಮಂಟಪದವರೆಗಿನ ಸಿ.ಸಿ.ರಸ್ತೆ ಕಾಮಗಾರಿ, ದುರ್ಗಾ ವೃತ್ತದಿಂದ ಜಗದಂಬಾ ಕಲ್ಯಾಣ ಮಂಟಪದವರೆಗಿನ ರಸ್ತೆ ಡಾಂಬರೀಕರಣ ಸ್ಥಗಿತಗೊಂಡದ್ದರಿಂದ ಜನರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

‘ಗುತ್ತಿಗೆದಾರರು ರಸ್ತೆಯನ್ನು ಅಗೆದು, ಗರಸ ಹಾಕಿ ಹೋದವರು ನಾಪತ್ತೆಯಾಗಿದ್ದಾರೆ. ಪುರಸಭೆ ಈ ಕುರಿತು ನಿರ್ಲಕ್ಷ್ಯ ವಹಿಸಿದ್ದರಿಂದ ನಿತ್ಯ ಹಿಂಸೆ ಅನುಭವಿಸುವಂತಾಗಿದೆ’ ಎಂದು ಪುರಸಭೆ ಸದಸ್ಯ ಅಶೋಕ ವನ್ನಾಲ ಮತ್ತು ಮುಖಂಡ ರವಿ ಗಡೇದವರ ಆರೋಪಿಸಿದ್ದಾರೆ.

‘ಜನರಿಗೆ ತೊಂದರೆ ಆಗದಂತೆ  ಕೆಲಸವನ್ನು ಬೇಗ ಮುಗಿಸಲು ಗುತ್ತಿಗೆದಾರರಿಗೆ ತಿಳಿಸಿದ್ದೇವೆ’ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.