ನರಗುಂದ: ಮಳೆಗಾಲ ಆರಂಭವಾಗಿ ಅರ್ಧ ಅವಧಿ ಸಮೀಪಿಸುತ್ತಿದ್ದರೂ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಮಳೆ ಬೀಳುತ್ತಿಲ್ಲ. ಇದರಿಂದ ಈ ಭಾಗದ ರೈತ ಸಮುದಾಯ ಆತಂಕಕ್ಕೆ ಒಳಗಾಗಿದೆ.
ಪಟ್ಟಣದ ದಂಡಾಪುರದ ಹಗೇದ ಕಟ್ಟಿ ಓಣಿಯಲ್ಲಿ ನಡೆದ ಬಸವಣ್ಣದೇವರ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಹೋರಾತ್ರಿ ಭಜನೆ, ಅನ್ನ ಸಂತರ್ಪಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕರವೇ ಮುಖಂಡರಾಘವೇಂದ್ರ ಗುಜಮಾಗಡಿ, ಬಸಯ್ಯ ಹಾರೋಗೇರಿಮಠ, ಡಾ. ಸುಭಾಸ ಮುಗಳಿ, ಬಸವರಾಜ ನೆಗಳೂರು, ಪ್ರಸಾದ ಗುಜಮಾಗಡಿ, ಬಸಪ್ಪ ಹೆಬ್ಬಾಳ, ಆರ್.ಎಂ.ಹೊಸೂರು, ಶೇಖಪ್ಪ ಹಕಾರಿ, ಸಿದ್ದಪ್ಪ ಆಯಟ್ಟಿ, ಹನಮಂತ ಕಾಟೇಕಾರ, ಅನೀಲ ಹಕಾರಿ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.