ADVERTISEMENT

ಮಾರನಬಸರಿ: ಮತ್ತೆ ಆಸ್ಪತ್ರೆ ಸೇರಿದ 42 ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 9:48 IST
Last Updated 5 ಮಾರ್ಚ್ 2014, 9:48 IST

ರೋಣ: ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡಿದ್ದ ಮಾರನ­ಬಸರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಕಳಿಸಲಾಗಿತ್ತು. ಆದರೆ ಮಂಗಳವಾರ ಮತ್ತೆ ಹೊಟ್ಟೆ­ನೋವು, ಭೇದಿ ಕಾಣಿಸಿಕೊಂಡ ಪರಿ­ಣಾಮ ಮತ್ತೆ 42 ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಸೋಮವಾರ ಊಟ ಮಾಡಿದ ಕೆಲವು ವಿದ್ಯಾರ್ಥಿಗಳು ಯಾವುದೇ ತೊಂದರೆ ಇಲ್ಲ ಎಂದು ಮನೆ­ಯಲ್ಲಿದ್ದಾಗ ದಿಢೀರನೇ ಹೊಟ್ಟೆ­ನೂವು ಪ್ರಾರಂಭವಾಗಿ ವಾಂತಿ, ಭೇದಿಗೆ ತುತ್ತಾದರು.  ಇದರಿಂದ ಗಾಬರಿ­ಗೊಂಡ ಪೋಷಕರು ಅವರನ್ನು ಮತ್ತೆ ಆಸ್ಪತ್ರಗೆ ಸೇರಿಸಿದು. ವಿದ್ಯಾರ್ಥಿ­ಗಳೆಲ್ಲರೂ 6 ರಿಂದ 14 ವರ್ಷ­ದೊಳಗಿನ  ಮಕ್ಕಳಾಗಿರು­ವುದರಿಂದ ತೀವ್ರ  ಹೊಟ್ಟೆ ನೋವು ತಾಳಲಾರದೆ ಅಳು­ತ್ತಿದ್ದ ದೃಶ್ಯ ಕಂಡು­ಬಂತು. ಸೋಮವಾರ ದಾಖಲಾದ 80ಕ್ಕೂ ಹೆಚ್ಚು ವಿದ್ಯಾರ್ಥಿ­ಗಳಿಗೆ ಸುಸಜ್ಜಿತವಾದ ಚಿಕಿತ್ಸೆ ನೀಡಿ­ರುವು­ದರಿಂದ ಅನೇಕ ವಿದ್ಯಾರ್ಥಿಗಳ ಆರೋಗ್ಯ ಸುಧಾರಣೆ­ಯಾಗಿ ಮನೆಗೆ ತೆರಳಿ­ದ್ದಾರೆ.

ಇವರಲ್ಲಿ ತೀವ್ರತೆಯಿಂದ ಬಳಲುತಿದ್ದ  ನಿರಂತರ­ವಾಗಿ ಚಿಕಿತ್ಸೆ ನೀಡ­ಲಾಗಿದೆ. ಇನ್ನೂ ಮಂಗಳವಾರ ದಾಖಲಾದವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. 

ತಹ­ಶೀಲ್ದಾರ್‌ ಎ.ಜಿ.ಪಂಡಿತ, ಕ್ಷೇತ್ರ ಶಿಕ್ಷ­ಣಾಧಿಕಾರಿ ಡಿ.ಐ.ಅಸುಂಡಿ, ತಾ.­ಪಂ.ಇಒ ಎಸ್.ಎಂ. ಪಿಡಶೆಟ್ರ, ಶಿಶು ಅಭಿವೃದ್ಧಿ  ಯೋಜನಾಧಿಕಾರಿ ಬಸವರಾಜ ಮೊಕಾಶಿ ಘಟನಾ ಸ್ಥಳ ಮಾರನಬಸರಿಗೆ ಆಗಮಿಸಿದಾಗ ಗ್ರಾಮಸ್ಥರು ಮುಖ್ಯ ಶಿಕ್ಷಕ ಪಿ.ಬಿ.­ಪಾಟೀಲ ಮತ್ತು ಅಡುಗೆ ತಯಾರ­ಕರನ್ನು  ಅಮಾನತುಗೊಳಿಸುವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್‌ ಮುಖ್ಯ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಿ ಮತ್ತು ಅಡುಗೆ ತಯಾಕರನ್ನು ಸೇವೆಯಿಂದ ಅಮಾನತುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.