ADVERTISEMENT

ರಘುನಾಥ ಚ.ಹ., ನಾಂದೋಡ್ಕರ್‌ಗೆ ಪ್ರಶಸ್ತಿ ಪ್ರದಾನ

ತೋಂಟದಾರ್ಯ ಮಠದಲ್ಲಿ 2,704ನೇ ಶಿವಾನುಭವ ಕಾರ್ಯಕ್ರಮ ಇಂದು

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 15:24 IST
Last Updated 28 ಜುಲೈ 2024, 15:24 IST
ರಘುನಾಥ ಚ.ಹ.
ರಘುನಾಥ ಚ.ಹ.   

ಗದಗ: ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ಸೋಮವಾರ ರಾತ್ರಿ 7.30ಕ್ಕೆ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ 2,704ನೇ ಶಿವಾನುಭವ ನಡೆಯಲಿದ್ದು, ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಗುರುಮಠಕಲ್‌ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಸಿದ್ಧಲಿಂಗೇಶ್ವರ ಮಠದ ಪಂಚಮ ಸಿದ್ಧಲಿಂಗೇಶ್ವರ ಸ್ವಾಮೀಜಿ ಸಮ್ಮುಖ ವಹಿಸುವರು.

ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಪೀಠಾರೋಹಣ ಮಾಡಿ ಜುಲೈ 29ಕ್ಕೆ 50 ವರ್ಷಗಳು ಪೂರ್ಣಗೊಂಡ ನಿಮಿತ್ತ ಪೀಠಾರೋಹಣ ಸುವರ್ಣ ಮಹೋತ್ಸವದ ಸ್ಮರಣೆಗಾಗಿ ಡಾ. ವೀರಣ್ಣ ರಾಜೂರ ನುಡಿನಮನ ಸಲ್ಲಿಸುವರು.

ADVERTISEMENT

ರುದ್ನೂರಿನ ತೋಂಟದಾರ್ಯ ಶಾಖಾಮಠಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿರುವ ಚನ್ನಮಲ್ಲಿಕಾರ್ಜುನ ದೇವರು ಅವರಿಗೆ ಸನ್ಮಾನ ನಡೆಯಲಿದೆ.

‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರಘುನಾಥ ಚ.ಹ. ಮತ್ತು ಟಿವಿ9 ವಾಹಿನಿಯ ಪ್ರಧಾನ ಕಾರ್ಯಕ್ರಮ ನಿರ್ಮಾಪಕ ವಿಲಾಸ ನಾಂದೋಡ್ಕರ್ ಅವರಿಗೆ 2024ನೇ ಸಾಲಿನ ‘ಡಾ. ತೋಂಟದ ಸಿದ್ಧಲಿಂಗಶ್ರೀ ಪುರಸ್ಕಾರ’ವನ್ನು ಪ್ರದಾನ ಮಾಡಲಾಗುವುದು.

ರುದ್ನೂರಿನ ತೋಂಟದ ಸಿದ್ಧೇಶ್ವರ ಸಮಿತಿ ಅಧ್ಯಕ್ಷ ಶಿವರಾಜ ಬಿ. ಪಾಟೀಲ ಹಾಗೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಸಂಗಡಿಗರಿಂದ ವಚನಸಂಗೀತ ಕಾರ್ಯಕ್ರಮ ನಡೆಯಲಿದೆ. ಶಶಿಕುಮಾರ ವೀರಣ್ಣ ಬಂಡಿ ಧರ್ಮಗ್ರಂಥ ಪಠಿಸುವರು. ರೋಹಿತ್‌ ವಿ. ತೊಂಡಿಹಾಳ ವಚನ ಚಿಂತನೆ ನಡೆಸಿಕೊಡುವರು.

ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ತೋಂಟದ ಸಿದ್ಧಲಿಂಗಶ್ರೀ ಪುರಸ್ಕಾರ ಸಮಿತಿಯ ಸಂಚಾಲಕ ಸಿದ್ದು ಸತ್ಯಣ್ಣವರ ಹಾಗೂ ಪದಾಧಿಕಾರಿಗಳು, ಡಂಬಳ ಮತ್ತು ರಾಜೇಶ, ಗಿರೀಶ ಈಶ್ವರಪ್ಪ ಮಾನ್ವಿ ಹಾಗೂ ಪರಿವಾರದವರು ವಹಿಸಿಕೊಂಡಿದ್ದಾರೆ ಎಂದು ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಲಾಸ ನಾಂದೋಡ್ಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.