ADVERTISEMENT

ಕೋವಿಡ್‌ ಕೇರ್‌ ಸೆಂಟರ್‌ನಿಂದ ಸೋಂಕಿತ ಪರಾರಿ

​ಪ್ರಜಾವಾಣಿ ವಾರ್ತೆ
Published 21 ಮೇ 2021, 18:33 IST
Last Updated 21 ಮೇ 2021, 18:33 IST

ಶಿರಹಟ್ಟಿ: ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ ಕೋವಿಡ್‌ ಕೇರ್‌ ಕೇಂದ್ರದಿಂದ ಒಬ್ಬ ಸೋಂಕಿತ ಶುಕ್ರವಾರ ಪರಾರಿಯಾಗಿದ್ದು, ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಪರಾರಿಯಾದ ಸೋಂಕಿತನನ್ನು ಆಜಾದ್‌ ಚವ್ಹಾಣ (28) ಎಂದು ಗುರುತಿಸಲಾಗಿದ್ದು, ಬಿಹಾರದವರು ಎನ್ನಲಾಗಿದೆ. ಈತ ಸದ್ಯ ಶಿರಹಟ್ಟಿ ತಾಲ್ಲೂಕಿನ ಸದ್ಭವ ಎಂಜಿನಿಯರಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೋಂಕು ದೃಢಪಟ್ಟ ಕಾರಣ ಆತ ಗುರುವಾರ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲಾಗಿದ್ದ. ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಕೋವಿಡ್‌ ಕೇರ್‌ ಸೆಂಟರ್‌ನಿಂದ ತಪ್ಪಿಸಿಕೊಂಡಿದ್ದಾನೆ.

ಕಿತ್ತೂರು ರಾಣಿ ಚೆನ್ನಮ್ಮ ಕೋವಿಡ್‌ ಕೇರ್‌ ಸೆಂಟರ್‌ಗೆ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿ ಭೇಟಿ ಪರಶೀಲಿಸಿದ ನಂತರ ಪರಾರಿಯಾದ ಆಜಾದ್‌ ಚವ್ಹಾಣ (ಸದ್ಭವ ಇಂಜಿನಿಯರಿಂಗ್‌ ರೋಡ್‌ ವರ್ಕ್ಸ್‌ ಛಬ್ಬಿ) ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಶಿರಹಟ್ಟಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.