ಗದಗ: ನಗರದ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ ಸಂಸ್ಥೆ ಆಯೋಜಿಸಿದ್ದ ಅಂತರ ಜಿಲ್ಲಾ ಕಿರಿಯರ ಲೆದರ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಮುಕ್ತಾಯಗೊಂಡಿದೆ.
ಈ ಪಂದ್ಯಾವಳಿಯಲ್ಲಿ ಗದಗ, ಹೊಸಪೇಟೆ, ವಿಜಯಪುರ, ಬಳ್ಳಾರಿ, ಧಾರವಾಡ ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು.
ಅಂತಿಮ ಹಣಾಹಣಿಯಲ್ಲಿ ಜಾನೊಪಂತರ ಕ್ರಿಕೆಟ್ ಅಕಾಡೆಮಿ ಹಾಗೂ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ ತಂಡಗಳು ಸೆಣಸಾಡಿದವು. ಫೈನಲ್ಸ್ನಲ್ಲಿ ಜಾನೋಪಂತರ ಕ್ರಿಕೆಟ್ ಅಕಾಡೆಮಿ ವಿಜಯಶಾಲಿಯಾಯಿತು.
ಈ ಟೂರ್ನಿಯನ್ನು ಡಾ. ಎಸ್.ಎಲ್.ಗುಳೆದಗುಡ್ಡ (ಮುನ್ನಾ) ಮಾರ್ಗದರ್ಶನದಲ್ಲಿ ಶಿವರಾಜ್ ಕರಡಿ, ಲಾಲಸಾಬ ಗುಳೇದಗುಡ್ಡ, ಸಚಿನ್ ಪಾಟೀಲ್, ಕಿರಣ್ ಆಸಂಗಿ, ಸಮೀರ್ ಗುಳೇದಗುಡ್ಡ, ಕಾರ್ತಿಕ್ ಬಾಗಲಕೋಟ, ಸಚಿನ್ ಜೋಗಿನ್, ದೇವೇಶ್ ಜೈನ್, ಸದಾಶಿವ, ನಿಖಿಲ್, ಕಾರ್ತಿಕ್ ಎಚ್, ರಾಮು, ಸಂತೋಷ್, ರಾಕೇಶ್, ಸಂದೇಶ ಆಯೋಜಿಸಿದ್ದರು.
ಪ್ರಶಸ್ತಿ ವಿತರಿಸಿ ಮಾತನಾಡಿದ ತಂಡದ ಆಯೋಜಕರಾದ ಡಾ. ಎಸ್.ಎಲ್.ಗುಳೆದಗುಡ್ಡ, ‘1996ರಲ್ಲಿ ಸ್ಥಾಪನೆಯಾದ ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ ಸಂಸ್ಥೆಯು ಜಿಲ್ಲೆ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಒದಗಿಸುತ್ತಾ ಬಂದಿದೆ. ಅಲ್ಲದೇ ಗ್ರಾಮೀಣ ಪ್ರತಿಭೆಗಳಿಗೆ ಯಾವುದೇ ಹಣ ತೆಗೆದುಕೊಳ್ಳದೆ ಉಚಿತವಾಗಿ ತರಬೇತಿ ನೀಡುತ್ತಾ ಬಂದಿದೆ’ ಎಂದು ಹೇಳಿದರು.
‘2021 ಜನವರಿ 26 ಜನವರಿರಂದು ಸ್ಪೋರ್ಟ್ಸ್ ಅಕಾಡೆಮಿ ಆಫ್ ಗದಗ ಸಂಸ್ಥೆಯು ಬೆಳ್ಳಿಹಬ್ಬ ಆಚರಿಸಿಕೊಳ್ಳಲಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.