ADVERTISEMENT

ಕೊಣ್ಣೂರು ಬಳಿ ಮುಳುಗಿದ ಹಳೆ ಸೇತುವೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 8:19 IST
Last Updated 12 ಅಕ್ಟೋಬರ್ 2020, 8:19 IST
ನರಗುಂದ ಸಮೀಪದ ಯಾವಗಲ್ ಬಳಿ ಬೆಣ್ಣೆ ಹಳ್ಳ ಸೇತುವೆಯ ಮೇಲೆ ನೀರು ಹರಿಯಿತು
ನರಗುಂದ ಸಮೀಪದ ಯಾವಗಲ್ ಬಳಿ ಬೆಣ್ಣೆ ಹಳ್ಳ ಸೇತುವೆಯ ಮೇಲೆ ನೀರು ಹರಿಯಿತು   

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಸಂಜೆ ಒಂದು ತಾಸು ಭಾರಿ ಮಳೆಯಾಗಿದ್ದು ಕೊಣ್ಣೂರ ಬಳಿ ಮಲಪ್ರಭಾ ಹೊಳೆಯ ಹಳೆ ಸೇತುವೆ ಸಂಪೂರ್ಣ ಮುಳುಗಿದೆ. ಸುತ್ತಮುತ್ತಲಿನ ಜಮೀನುಗಳಲ್ಲಿನ ಬೆಳೆಗಳು ಜಲಾವೃತವಾಗಿವೆ.

ಅಲ್ಲಲ್ಲಿ ಮನೆಗಳು ಕುಸಿದಿವೆ. ಹಲವೆಡೆ ರಸ್ತೆಗಳು ಕಿತ್ತು ಹೋಗಿವೆ.

ಬೆಣ್ಣೆ ಹಳ್ಳದ ಆತಂಕ: ತಾಲ್ಲೂಕಿನ ಕುರ್ಲಗೇರಿ, ಸುರಕೋಡ, ಯಾವಗಲ್ ಬಳಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ಯಾವಗಲ್ ಬಳಿ ಬೆಣ್ಣೆ ಹಳ್ಳ ಸೇತುವೆ ಮೇಲೆ ಹರಿದು ಎರಡು ಗಂಟೆ ಸಂಚಾರ ಬಂದ್‌ ಆಗಿತ್ತು. ಸಂಜೆ ಪ್ರವಾಹ ಕಡಿಮೆಯಾಗಿದ್ದರಿಂದ ಮತ್ತೆ ಸಂಚಾರ ಆರಂಭವಾಯಿತು.

ADVERTISEMENT

ಅಕ್ಕಿ ಹಾನಿ: ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಾಯಿ ದಾಸೋಹ ಕೇಂದ್ರಕ್ಕೆ ಶನಿವಾರ ಮಳೆ ನೀರು ನುಗ್ಗಿದ ಪರಿಣಾಮ ಅಲ್ಲಿದ್ದ ಅಕ್ಕಿ ಚೀಲಗಳು ಹಾನಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.