ADVERTISEMENT

ನಾನು ಸಿದ್ದರಾಮ, ಮೌಢ್ಯತೆ ಇಲ್ಲ: ಸಿಎಂ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 4:38 IST
Last Updated 14 ಡಿಸೆಂಬರ್ 2025, 4:38 IST
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆದೇಶ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಶನಿವಾರ ಲಕ್ಷ್ಮೇಶ್ವರದಲ್ಲಿ ತಾಲ್ಲೂಕು ಸಮಗ್ರ ರೈತಪರ ಹೋರಾಟ ವೇದಿಕೆ ರೈತರು ಸನ್ಮಾನಿಸಿದರು.
ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆದೇಶ ನೀಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಶನಿವಾರ ಲಕ್ಷ್ಮೇಶ್ವರದಲ್ಲಿ ತಾಲ್ಲೂಕು ಸಮಗ್ರ ರೈತಪರ ಹೋರಾಟ ವೇದಿಕೆ ರೈತರು ಸನ್ಮಾನಿಸಿದರು.   

ಲಕ್ಷ್ಮೇಶ್ವರ (ಗದಗ): ‘ಸಿದ್ದ ಅಂದರೆ ಶಿವ; ರಾಮ ಅಂದರೆ ವಿಷ್ಣು. ಶಿವ ಮತ್ತು ವಿಷ್ಣು ಎರಡೂ ಸೇರಿ ಸಿದ್ದರಾಮ ಆಗಿದ್ದೇನೆ. ಆದರೆ, ನನ್ನಲ್ಲಿ ಕಂದಾಚಾರ, ಮೌಢ್ಯತೆ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ಇಲ್ಲಿ ನಡೆದ ಸಿ.ಎನ್‌.ಆರ್‌.ರಾವ್‌ 10ನೇ ವರ್ಷದ ವಿಜ್ಞಾನ ವಿಸ್ತೃತ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್.ಪಾಟೀಲ ಅವರಿಗೆ 2025ನೇ ಸಾಲಿನ ‘ಚಂದನ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಶಿಕ್ಷಣವಂತರಿಂದಲೇ ಜಾತಿ ವ್ಯವಸ್ಥೆ ಬೇರೂರುತ್ತಿದೆ. ಬಸವಣ್ಣನವರು ಅಂದೇ ಕರ್ಮ ಸಿದ್ಧಾಂತ ವಿರೋಧಿಸಿದ್ದರು. ಜಾತಿ ವ್ಯವಸ್ಥೆ ನಿರ್ಮೂಲನೆಗೆ ಮನುಷ್ಯ ಕಂದಾಚಾರ, ಮೌಢ್ಯಗಳನ್ನು ಬಿಡಬೇಕು. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT
ಲಕ್ಷ್ಮೇಶ್ವರದ ಚಂದನ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್.ಪಾಟೀಲ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಚಂದನ ಶ್ರೀ’ ಪ್ರಶಸ್ತಿ ಪ್ರದಾನ ಮಾಡಿದರು. ರೋಣ ಶಾಸಕ ಜಿ.ಎಸ್‌.ಪಾಟೀಲ ಸಚಿವ ಎಚ್‌.ಕೆ.ಪಾಟೀಲ ಇದ್ದಾರೆ.