ADVERTISEMENT

ಕೋಳಿವಾಡ ರಸ್ತೆ: ಸೂಚನಾ ಫಲಕ ಅಳವಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 11:46 IST
Last Updated 20 ಅಕ್ಟೋಬರ್ 2021, 11:46 IST
ಮುಳಗುಂದ ಸಮೀಪದ ಚಿಂಚಲಿ ಕೋಳಿವಾಡ ರಸ್ತೆ ತಿರುವು
ಮುಳಗುಂದ ಸಮೀಪದ ಚಿಂಚಲಿ ಕೋಳಿವಾಡ ರಸ್ತೆ ತಿರುವು   

ಮುಳಗುಂದ: ಚಿಂಚಲಿ ಗ್ರಾಮದಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಕೋಳಿವಾಡ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ರಸ್ತೆ ಅಪಘಾತ ಸೂಚನಾ ಫಲಕ ಅಳವಡಿಸಬೇಕು. ಮುದುಕರಡ್ಡೆ ಕೆರೆ ಸಮೀಪದ ರಸ್ತೆ ತಿರುವಿನಲ್ಲಿ ತಡೆಗೋಡೆ ಮತ್ತು ಸೂಚನಾ ಫಲಕ ಹಾಕಿಲ್ಲ.

ಈ ಮಾರ್ಗವು ಶಿರಹಟ್ಟಿ, ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ನಿತ್ಯ ನೂರಾರು ವಾಹನ ಸವಾರರು ಇದೇ ಮಾರ್ಗವನ್ನು ಬಳಸುತ್ತಾರೆ. ತಿರುವಿನಲ್ಲಿ ವೇಗವಾಗಿ ಬಂದ ವಾಹನಗಳು ಉರುಳಿ ಬಿದ್ದು, ಸರಣಿ ಅಪಘಾತಗಳು ಸಂಭವಿಸಿದ್ದೂ ಇದೆ. ಹೀಗಾಗಿ, ಲೋಕೋಪಯೋಗಿ ಇಲಾಖೆ ಎಚ್ಚೆತ್ತು ಕೂಡಲೇ ಸೂಚನಾ ಫಲಕ ಅಳವಡಿಸಬೇಕು.
ಸಂಜೀವ ಹಳ್ಯಾಳ, ಚಿಂಚಲಿ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT