ನರಗುಂದ: ಪಟ್ಟಣದ ಸೋಮಾಪುರ ಓಣಿಯ ರಾಚಯ್ಯ ನಗರದ ಹತ್ತಿರವಿರುವ ಫಾರ್ಮ್ಹೌಸ್ನಲ್ಲಿ ಸಾಕಿದ ಟಗರುಗಳ ಮೇಲೆ ಭಾನುವಾರ ಸಂಜಡ ಬೀದಿ ನಾಯಿಗಳು ದಾಳಿ ನಡೆಸಿದ್ದು, 7 ಟಗರುಗಳು ಮೃತಪಟ್ಟಿವೆ. ಐದು ಟಗರುಗಳು ಗಂಭೀರ ಗಾಯಗೊಂಡಿವೆ.
ಬೀರಪ್ಪ ಹನಮಪ್ಪ ಗೊಗೇರಿಯವರಿಗೆ ಸೇರಿದ ಟಗರುಗಳಿವು. ತೀವ್ರ ಗಾಯಗೊಂಡ ಟಗರುಗಳಿಗೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ಸಂತೋಷ ಫಾರ್ಮ್ಹೌಸ್ಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ.
‘ಬೀದಿ ನಾಯಿಗಳ ದಾಳಿಯಿಂದ 7 ಟಗರು ಸಾವನ್ನಪ್ಪಿ, ಕೆಲವು ಟಗರುಗಳು ಗಾಯಗೊಂಡಿವೆ. ಇದರಿಂದ ₹1 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಬೀದಿ ನಾಯಿಗಳ ದಾಳಿಯಿಂದ ಟಗರುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಪುರಸಭೆ ಅಧಿಕಾರಿಗಳು ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು’ ಎಂದು ಬೀರಪ್ಪ ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.