
ಕೊಣನೂರು: ಪಟ್ಟಣದ ಸಮುದಾಯ ಕೇಂದ್ರದಲ್ಲಿ ₹1.75 ಲಕ್ಷ ಮೊತ್ತದ ಸ್ವಯಂಚಾಲಿತ ಬಾಹ್ಯ ಹೃದಯ ಕಂಪನ ನಿಯಂತ್ರಿಸುವ ಸಾಧನ ಹಾಗೂ ₹80 ಸಾವಿರ ಮೊತ್ತದ ಡೆಂಟಲ್ ಎಕ್ಸರೇ ಸಾಧನಕ್ಕೆ ಶಾಸಕ ಎ.ಮಂಜು ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳಿಗೆ ಹೃದಯಾಘಾತವಾದರೆ ಬೇರೆಡೆಗೆ ತಲುಪುವವರೆಗೆ ತೊಂದರೆಯಾಗದಂತೆ ತಡೆಗಟ್ಟಲು ಸ್ವಯಂಚಾಲಿತ ಬಾಹ್ಯ ಹೃದಯ ಕಂಪನ ನಿಂಯಂತ್ರಿಸುವ ಸಾಧನ ಅನುಕೂಲಕರ. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು’ ಎಂದರು.
‘ಡೆಂಟಲ್ ಎಕ್ಸರೇ, ಹಲ್ಲು ಹೊರತೆಗೆಯುವಿಕೆ, ಹಲ್ಲು ಶುಚಿಗೊಳಿಸುವ ಸಾಧನಗಳೂ ಇದ್ದು, ಮುಂದಿನ ಒಂದು ವಾರದೊಳಗೆ ಸೌಲಭ್ಯ ದೊರಕಲಿದೆ’ ಎಂದು ತಿಳಿಸಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುನಿಲ್, ದಂತ ವೈದ್ಯೆ ರಮ್ಯಾ, ವೈದ್ಯಾಧಿಕಾರಿ ಡಾ.ಸುದರ್ಶನ್, ಡಾ.ಪ್ರಿಯಾಂಕ, ನೇತ್ರಾಧಿಕಾರಿ ಶಶಿಕುಮಾರ್, ಆರೋಗ್ಯ ನಿರೀಕ್ಷಕ ಆನಂದಗೌಡ, ಗ್ರಾ.ಪಂ ಅಧ್ಯಕ್ಷೆ ಮಿಜ್ಬಾ ರಿಜ್ವಾನ್, ತಾ.ಪಂ ಮಾಜಿ ಸದಸ್ಯ ಇಮ್ರಾನ್ ಮೊಕ್ತಾರ್, ಮುಖಂಡ ಹರಿಗೌಡ, ಎಸ್.ನಾಗರಾಜ್, ಸುರೇಶ್, ವೆಂಕಟೇಶ್, ಸೋಮಶೇಖರ್, ರವಿಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.