ADVERTISEMENT

ಕಾಡಾನೆ ಕಳೇಬರದಲ್ಲಿ ಗುಂಡು ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 12:04 IST
Last Updated 6 ಜನವರಿ 2021, 12:04 IST
ಹೆತ್ತೂರು ಹೋಬಳಿಯ ಅರಣಿ ಗ್ರಾಮದಲ್ಲಿ ಮೃತಪಟ್ಟ ಕಾಡಾನೆ ದೇಹದಿಂದ ತೆಗೆಯಲಾಗಿರುವ ಗುಂಡು.
ಹೆತ್ತೂರು ಹೋಬಳಿಯ ಅರಣಿ ಗ್ರಾಮದಲ್ಲಿ ಮೃತಪಟ್ಟ ಕಾಡಾನೆ ದೇಹದಿಂದ ತೆಗೆಯಲಾಗಿರುವ ಗುಂಡು.   

ಹೆತ್ತೂರು: ಹೋಬಳಿಯ ಅರಣಿ ಸಮೀಪದ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದ ಕಾಡಾನೆಯ ಶವ ಪರೀಕ್ಷೆ ಮಾಡಿದ ವೇಳೆ ದೇಹದಲ್ಲಿ ಗುಂಡು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಆರೋಪಿಗಳ ಪತ್ತೆಗೆ ಶೋಧ ಮುಂದುವರಿಸಿದೆ.

ಯಸಳೂರು ಅರಣ್ಯ ವಲಯದಲ್ಲಿಜ. 2ರಂದು ಹಿಡುವಳಿ ಗದ್ದೆ ಪ್ರದೇಶದಲ್ಲಿ 20 ವರ್ಷದ ಹೆಣ್ಣಾನೆ ಶವ ಪತ್ತೆಯಾಗಿತ್ತು. ಕುತ್ತಿಗೆ ಭಾಗದಲ್ಲಿ ಗುಂಡು ದೊರೆತಿದ್ದು, ಆನೆಯ ದೇಹದಲ್ಲಿ ಸಿಕ್ಕಿರುವ ಕಬ್ಬಿಣದ ವಸ್ತುವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ನರಸಿಂಹಮೂರ್ತಿ ತಿಳಿಸಿದರು.

ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ತಮ್ಮ ಬೆಳೆ ರಕ್ಷಿಸಿಕೊಳ್ಳಲು ಅಥವಾ ಬೇಟೆಗಾರರು ಕಾಡು ಹಂದಿ ಎಂದು ತಪ್ಪು ಗ್ರಹಿಸಿ ಆನೆಗೆ ಗುಂಡು ಸಿಡಿಸಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.