ADVERTISEMENT

ವಿದ್ಯಾರ್ಥಿಗಳಿಂದ ಬಸ್‌ ನಿಲ್ದಾಣ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2023, 13:40 IST
Last Updated 14 ಜೂನ್ 2023, 13:40 IST
ಅರಕಲಗೂಡು ಬಸ್ ನಿಲ್ದಾಣದ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬುಧವಾರ ಸ್ವಚ್ಚತಾ ಕಾರ್ಯ ನಡೆಸಿದರು
ಅರಕಲಗೂಡು ಬಸ್ ನಿಲ್ದಾಣದ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಬುಧವಾರ ಸ್ವಚ್ಚತಾ ಕಾರ್ಯ ನಡೆಸಿದರು   

ಅರಕಲಗೂಡು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದ ನಿಲ್ದಾಣದ ಸುತ್ತ ಬೆಳೆದಿದ್ದ ಕಳೆ ಗಿಡಗಳನ್ನು ಕಿತ್ತು ಕಸಕಡ್ಡಿಗಳನ್ನು ತೆಗೆದು ಬುಧವಾರ ಸ್ವಚ್ಚತಾ ಕಾರ್ಯ ನಡೆಸಿದರು.

ರಾಣಿ ಚೆನ್ನಮ್ಮ ರೇಂಜರ್ಸ್  ಲೀಡರ್ ಅಶ್ವಿನಿ ಹಾಗೂ ರೋವರ್ಸ ಲೀಡರ್ ರಾಹುಲ್ ನೇತೃತ್ವ ವಹಿಸಿದ್ದರು. ಪ್ರಾಂಶುಪಾಲರಾದ ಡಿ.ಕೆ. ತಾರಾದೇವಿ, ದೈಹಿಕ ಶಿಕ್ಷಣ ಶಿಕ್ಷಕ ಶಿವಕುಮಾರ್, ಡಿಪೊ ವ್ಯವಸ್ಥಾಪಕ ಕೆ.ಟಿ.ಹನುಮಂತಪ್ಪ, ಸಹಾಯಕ ವ್ಯವಸ್ಥಾಪಕ ಎ.ಎ. ಬಸವರಾಜ್, ಚಾಲನಾ ತರಬೇತಿ ಬೋಧಕ ಕೆ.ಆರ್.ಶಂಬುಲಿಂಗಪ್ಪ, ಸಂಚಾರ ನಿಯಂತ್ರಾಣಾಧೀಕಾರಿ ಎಸ್.ಬಿ.ರಹಮತ್ ಉಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT