ಹಾಸನ: ನಗರದ ಹೊರವಲಯದ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ಯಂತ್ರದ ಬಿಡಿಭಾಗದೊಳಗೆ ಬುಧವಾರ ಸಿಲುಕಿದ್ದ ನಾಗರ ಹಾವನ್ನು ರಕ್ಷಿಸಲು ಬಂದ ಉರುಗ ರಕ್ಷಕ ಸ್ನೇಕ್ ಶೇಷಪ್ಪ ಅವರಿಗೆ ಹಾವು ಕಚ್ಚಿದೆ.
ಕಾರ್ಖಾನೆ ಮಾಲೀಕರ ಮನವಿ ಮೇರೆಗೆ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸ್ನೇಕ್ ಶೇಷಪ್ಪ ಬಂದಿದ್ದರು. ಯಂತ್ರದ ಬಿಡಿಭಾಗದಲ್ಲಿ ಹಾವಿನ ಹೊಟ್ಟೆ ಸಿಲುಕಿತ್ತು. ಅದನ್ನು ಹಿಡಿದು, ದೇಹಕ್ಕೆ ಸುತ್ತಿಕೊಂಡಿದ್ದ ಕಬ್ಬಿಣವನ್ನು ಬಿಡಿಸುತ್ತಿದ್ದರು. ಈ ವೇಳೆ ಅವರ ಎಡಗೈ ಹೆಬ್ಬೆರಳಿಗೆ ಹಾವು ಕಚ್ಚಿದೆ. ಈ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಹಾವು ಕಚ್ಚಿದರೂ ಧೃತಿಗೆಡದ ಶೇಷಪ್ಪ, ಹಾವನ್ನು ರಕ್ಷಿಸಿ ನಂತರ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.