ADVERTISEMENT

ಕ್ರಿಕೆಟ್ ಬೆಟ್ಟಿಂಗ್‌: ಐವರ ಬಂಧನ

₹ 5,450 ನಗದು, ಎರಡು ಮೊಬೈಲ್‌ ವಶ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 15:18 IST
Last Updated 28 ಸೆಪ್ಟೆಂಬರ್ 2020, 15:18 IST

ಹಾಸನ: ನಗರದಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಆಡುತ್ತಿದ್ದ ಐವರನ್ನು ಹಾಸನ ಬಡಾವಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ನಗರದ ವಲ್ಲಬಾಯಿ ರಸ್ತೆ ನಿವಾಸಿ, ವ್ಯಾಪಾರಿ ಹರೀಶ್ (23), ಶಾಂತಿಗ್ರಾಮದಲ್ಲಿ ಟೀ-ಕ್ಯಾಂಟೀನ್ ನಡೆಸುವ ಮಧು (25), ಬಟ್ಟೆ ವ್ಯಾಪಾರಿ ಪವನ್ (30), ಹೊಸಲೈನ್‌ ರಸ್ತೆಯ ಗೌತಮ್ (35), ಚನ್ನಪಟ್ಟಣ ಹೌಸಿಂಗ್ ಬೋರ್ಡ್ ನಿವಾಸಿ ಅರ್ಜುನ್ (31) ನನ್ನು ಬಂಧಿಸಿ, ₹5,450 ನಗದು, ಎರಡು ಮೊಬೈಲ್‌ ವಶಪಡಿಸಿಕೊಳ್ಳಲಾಗಿದೆ.

ನಗರದ ಬೀರನಹಳ್ಳಿ ಕೆರೆ ಮುಖ್ಯ ರಸ್ತೆಯ ಆರ್.ಆರ್. ಎಂಟರ್ ಪ್ರೈಸಸ್ ನಲ್ಲಿ ಮುಖ್ಯ ಆರೋಪಿ ಹರೀಶ್ ಇತರರೊಂದಿಗೆ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದ. ಈ ಮಾಹಿತಿ ಆಧರಿಸಿ ಪಿಎಸ್‌ಐ ಅಶ್ವಿನಿನಾಯ್ಕ,ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ಗಳಾದ ನಿಂಗೇಗೌಡ, ಕೃಷ್ಣಕುಮಾರ್, ಕೃಷ್ಣಶೆಟ್ಟಿ, ಅಣ್ಣಪ್ಪ ಕಾರ್ಯಾಚರಣೆನಡೆಸಿದರು. ಪೋಲಿಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ಗೌಡ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ಗಾಂಜಾ ಗಿಡ ವಶ: ಒಬ್ಬನ ವಶ

ADVERTISEMENT

ಹಾಸನ: ತಾಲ್ಲೂಕಿನ ನಂಜದೇವರ ಕಾವಲು ಗ್ರಾಮದ ಕೃಷ್ಣೇಗೌಡರ ಮನೆಯ ಹಿತ್ತಲಿನಲ್ಲಿ ಬೆಳೆದಿದ್ದ₹5,500 ಬೆಲೆಯ ಗಾಂಜಾ ಗಿಡ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಬಸವರಾಜು ಅವರು ಮನೆ ಮೇಲೆ ದಾಳಿ ಮಾಡಿ ಸುಮಾರು 1ಕೆ.ಜಿ 200 ಗ್ರಾಂ ತೂಕದ ಹಸಿ ಗಾಂಜಾ ಗಿಡ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.