ADVERTISEMENT

ಅರಸೀಕೆರೆ | 'ಒಳ ಮೀಸಲಾತಿ ಜಾರಿಗೆ ಒತ್ತಾಯ'

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:09 IST
Last Updated 15 ಏಪ್ರಿಲ್ 2025, 14:09 IST
ಮಾದಿಗರ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ರಾಜ್ಯ ಮಾದಿಗರ ಒಳ ಮೀಸಲಾತಿ ಕ್ರಾಂತಿಕಾರಿ ಹೋರಾಟ ಸಂಘಟನೆ ಸದಸ್ಯರು ಅರಸೀಕೆರೆಯಲ್ಲಿ ಪ್ರತಿಭಟಿಸಿದರು
ಮಾದಿಗರ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ರಾಜ್ಯ ಮಾದಿಗರ ಒಳ ಮೀಸಲಾತಿ ಕ್ರಾಂತಿಕಾರಿ ಹೋರಾಟ ಸಂಘಟನೆ ಸದಸ್ಯರು ಅರಸೀಕೆರೆಯಲ್ಲಿ ಪ್ರತಿಭಟಿಸಿದರು   

ಅರಸೀಕೆರೆ: ‘ಮಾದಿಗರ ಒಳ ಮೀಸಲಾತಿ ಜಾರಿ ಆಗುವವರೆಗೂ ಬಡ್ತಿ, ನೇಮಕಾತಿಯನ್ನು ತಡೆಹಿಡಿಯಬೇಕು’ ಎಂದು ರಾಜ್ಯ ಮಾದಿಗರ ಒಳ ಮೀಸಲಾತಿ ಕ್ರಾಂತಿಕಾರಿ ಹೋರಾಟಗಾರ ಭಾಸ್ಕರ್ ಪ್ರಸಾದ್ ಆಗ್ರಹಿಸಿದರು.

ನಗರದ ಪಿ.ಪಿ. ವೃತ್ತದಲ್ಲಿ ಮಾದಿಗರ ಒಳ ಮೀಸಲಾತಿ ಕ್ರಾಂತಿಕಾರಿ ಹೋರಾಟ ರಥಯಾತ್ರೆಯ ನೇತೃತ್ವ ವಹಿಸಿ ಮಾತನಾಡಿದರು.

‘ಮಾದಿಗರ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಯನ್ನು ಜೂನ್ 9ರಂದು ಹಮ್ಮಿಕೊಳ್ಳಲಾಗಿದೆ. ಸಮುದಾಯದ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ರಾಜ್ಯ ಸರ್ಕಾರ ಮಾದಿಗರ ಒಳ ಮೀಸಲಾತಿ ಜಾರಿ ಮಾಡದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ಈ ರಥಯಾತ್ರೆಯು ಕರ್ನಾಟಕದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಸಂಚರಿಸಲಿದೆ’ ಎಂದರು.

ಕಿದ್ವಾಯಿ ಸೋಮಶೇಖರ್, ನಿವೃತ್ತ ಪೊಲೀಸ್ ಅಧಿಕಾರಿ ಶಿವಣ್ಣ, ತಾಲ್ಲೂಕು ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎ.ಪಿ. ಚಂದ್ರಯ್ಯ, ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್, ಮಾದಿಗ ಸಮುದಾಯದ ಮುಖಂಡರಾದ ಶಿವಮೂರ್ತಿ ಗುತ್ತಿನಕೆರೆ, ಶೇಖರಪ್ಪ ನಾಗವೇದಿ, ಕರಿಯಪ್ಪ ನಾಗವೇದಿ, ಜಯಕುಮಾರ್, ರುದ್ರಮುನಿ, ದಾಸಪ್ಪ, ಮಹೇಶ್ ಬಾಣಾವರ, ಭಾಸ್ಕರ್ ಜಾಜೂರು, ರಂಗನಾಥ ಮಾಡಾಳು, ಗೋವಿಂದರಾಜು, ಭಾಸ್ಕರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.