ADVERTISEMENT

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ; ಡಿಸಿ

ಇಸ್ರೋ ಸ್ಪೇಸ್ ಆನ್ ವ್ಹೀಲ್ಸ್ ಮೊಬೈಲ್ ಮ್ಯೂಸಿಯಂ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 15:18 IST
Last Updated 8 ಅಕ್ಟೋಬರ್ 2021, 15:18 IST
ಹಾಸನದ ಗಂಧದ ಕೋಠಿ ಬಾಲಕಿಯರ ಸರ್ಕಾರಿ ವಿಭಜಿತ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ವಿಶ್ವಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮದಲ್ಲಿ ಉಪಗ್ರಹಗಳ ಬಗ್ಗೆ ಎಂಸಿಎಫ್ ನಿರ್ದೇಶಕ ಎಚ್.ಪ್ರೇಮಾನಂದ ಶೆಣ್ಯೆ ಮಾಹಿತಿನ ನೀಡಿದರು. ಉಪ ನಿರ್ದೇಶಕ ಸತ್ಯನಾರಾಯಣ್, ವಿಶ್ವ ಬಾಹ್ಯಾಕಾಶ ಸಪ್ತಾಹ ಸಮಿತಿ ಮುಖ್ಯಸ್ಥ ರಮೇಶ್ ಮುದುಂಬಾ, ಪ್ರಾಂಶುಪಾಲ ಕೆ.ಟಿ. ಸುರೇಶ್, ಉಪ ಪ್ರಾಂಶುಪಾಲೆ ದೀಪಾ ಇದ್ದಾರೆ.
ಹಾಸನದ ಗಂಧದ ಕೋಠಿ ಬಾಲಕಿಯರ ಸರ್ಕಾರಿ ವಿಭಜಿತ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ವಿಶ್ವಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮದಲ್ಲಿ ಉಪಗ್ರಹಗಳ ಬಗ್ಗೆ ಎಂಸಿಎಫ್ ನಿರ್ದೇಶಕ ಎಚ್.ಪ್ರೇಮಾನಂದ ಶೆಣ್ಯೆ ಮಾಹಿತಿನ ನೀಡಿದರು. ಉಪ ನಿರ್ದೇಶಕ ಸತ್ಯನಾರಾಯಣ್, ವಿಶ್ವ ಬಾಹ್ಯಾಕಾಶ ಸಪ್ತಾಹ ಸಮಿತಿ ಮುಖ್ಯಸ್ಥ ರಮೇಶ್ ಮುದುಂಬಾ, ಪ್ರಾಂಶುಪಾಲ ಕೆ.ಟಿ. ಸುರೇಶ್, ಉಪ ಪ್ರಾಂಶುಪಾಲೆ ದೀಪಾ ಇದ್ದಾರೆ.   

ಹಾಸನ: ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದರು.

ನಗರದ ಗಂಧದ ಕೋಠಿ ಬಾಲಕಿಯರ ಸರ್ಕಾರಿ ವಿಭಜಿತ ಕಾಲೇಜು ಆವರಣದಲ್ಲಿ ಶುಕ್ರವಾರ ವಿಶ್ವ ಬಾಹ್ಯಾಕಾಶ ಸಪ್ತಾಹ ಅಂಗವಾಗಿ ಎಂಸಿಎಫ್ (ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ) ಹಮ್ಮಿಕೊಂಡಿದ್ದ ಇಸ್ರೋ ಸ್ಪೇಸ್ ಆನ್ ವ್ಹೀಲ್ಸ್ ಮೊಬೈಲ್ ಮ್ಯೂಸಿಯಂ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಒಂದು ವಿಷಯವನ್ನು ವೈಜ್ಞಾನಿಕವಾಗಿ ಆಲೋಚಿಸಿ ಖಾತ್ರಿ ಪಡಿಸಿಕೊಂಡ ಮೇಲೆಯೇ
ಮುಂದುವರೆಯಬೇಕು. ಬಾಹ್ಯಾಕಾಶದಲ್ಲಿ 36 ಸಾವಿರ ಕಿ.ಮೀ. ದೂರದಲ್ಲಿ ಜಿಯೋ ಸಿಂಕ್ರೊನಸ್ ಉಪಗ್ರಹ ಉಡ್ಡಯನ ಮಾಡುವ ಸಾಮರ್ಥ್ರ್ಯ ಹೊಂದಿರುವಪ್ರಪಂಚದ 6 ರಾಷ್ಟ್ರಗಳಲ್ಲಿ ಭಾರತ ದೇಶವೂ ಒಂದಾಗಿದ್ದು, ಎಂಸಿಎಫ್ ಮೂಲಕ ಉಪಗ್ರಹಗಳ ನಿಯಂತ್ರಣಮಾಡುತ್ತಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ ಎಂದರು.

ADVERTISEMENT

ವಾಣಿಜ್ಯ ಕ್ರಾಂತಿ ಉಂಟು ಮಾಡುವುದರಲ್ಲಿ ಬಾಹ್ಯಾಕಾಶ ಹಾಗೂ ಉಪಗ್ರಹಗಳು ಪ್ರಮುಖ ಪಾತ್ರವಹಿಸುತ್ತಿದ್ದು, ಇದರ ಹಿಂದಿನ ಶಕ್ತಿ ಇಸ್ರೋ ಹಾಗೂ ಉಪಗ್ರಹ ನಿಯಂತ್ರಣ ಕೇಂದ್ರ ಮುಖ್ಯವಾಗಿದೆ ಎಂದರು.

ಅಂತರಿಕ್ಷದ ಬಗ್ಗೆ ಹಿಂದಿನ ದಿನಗಳಲ್ಲಿ ಜನರಿಗೆ ಮಾಹಿತಿ ಇರಲಿಲ್ಲ. ಇಂದು ಮಾಹಿತಿ ತಂತ್ರಜ್ಞಾನದ ಹೊಸ ಆವಿಷ್ಕಾರದಿಂದಹೆಚ್ಚು ಮಾಹಿತಿ ಲಭ್ಯವಾಗುತ್ತಿವೆ. ಸ್ಪೇಸ್ ಆನ್ ವ್ಹೀಲ್ಸ್ ಮೊಬೈಲ್ ಮ್ಯೂಸಿಯಂ ಪ್ರದರ್ಶನದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿಚಾರ ತಿಳಿಸುವುದರ ಜೊತೆಗೆ ಹೆಚ್ಚು ಜನರನ್ನು ಬಾಹ್ಯಾಕಾಶದತ್ತ ಸೆಳೆಯಬಹುದು ಎಂದು ಅಭಿಪ್ರಾಯಪಟ್ಟರು.

ಉಪಗ್ರಹ ನಿಯಂತ್ರಣ ಕೇಂದ್ರದ ನಿರ್ದೇಶಕ ಎಚ್.ಪ್ರೇಮಾನಂದ ಶಣ್ಯೆ ಮಾತನಾಡಿ, ಜಗತ್ತಿನಲ್ಲಿ ಮೊದಲ ಕೃತಕ ಉಪಗ್ರಹವನ್ನು 1957 ರ ಅ.4 ರಂದು ಅಂತರಿಕ್ಷಕ್ಕೆ ಉಡಾವಣೆ ಮಾಡಿದ್ದು ಯಶಸ್ವಿಯಾಯಿತು. ಬಾಹ್ಯಾಕಾಶಕ್ಕೆ ಮೊದಲ ಬಾರಿಗೆ ರಷ್ಯಾ ಮೂಲದ ಮಹಿಳೆ 1963 ರಲ್ಲಿ ಸಂಚರಿಸಿದರು. ಇಸ್ರೋದ ಯಶೋಗಾಥೆಯನ್ನು ಜನರಿಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮುಟ್ಟಿಸುವ ಪ್ರಯತ್ನ ಇದಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.