ADVERTISEMENT

ಅರಕಲಗೂಡು: ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 12:45 IST
Last Updated 17 ಜೂನ್ 2025, 12:45 IST
ಅರಕಲಗೂಡಿನಲ್ಲಿಸೋಮವಾರ ಶಾಸಕ ಎ. ಮಂಜು ಗ್ರಾಮಆಡಳಿತಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದರು. ಕೆ.ಸಿ. ಸೌಮ್ಯ, ಸಿ.ಸ್ವಾಮಿ, ಕೆ. ಎಸ್. ಲೋಕೇಶ್ ಭಾಗವಹಿಸಿದ್ದರು.
ಅರಕಲಗೂಡಿನಲ್ಲಿಸೋಮವಾರ ಶಾಸಕ ಎ. ಮಂಜು ಗ್ರಾಮಆಡಳಿತಾಧಿಕಾರಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದರು. ಕೆ.ಸಿ. ಸೌಮ್ಯ, ಸಿ.ಸ್ವಾಮಿ, ಕೆ. ಎಸ್. ಲೋಕೇಶ್ ಭಾಗವಹಿಸಿದ್ದರು.   

ಅರಕಲಗೂಡು: ಗ್ರಾಮೀಣ ಭಾಗದ ರೈತರಿಗೆ ಶೀಘ್ರವಾಗಿ ಸೇವೆ ಒದಗಿಸಲು ನೆರವಾಗುವಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ಸರ್ಕಾರ ಲ್ಯಾಪ್ ಟ್ಯಾಪ್ ಒದಗಿಸಿದ್ದು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಶಾಸಕ ಮಂಜು ತಿಳಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ 19 ಮಂದಿಗೆ ಲ್ಯಾಪ್ ಟ್ಯಾಪ್ ವಿತರಿಸಿ ಮಾತನಾಡಿದ ಅವರು, ‘ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಜನಸಾಮಾನ್ಯರು, ಕೃಷಿಕರು ತಮ್ಮ ಕೆಲಸಕ್ಕಾಗಿ ಕಚೇರಿಗೆ ಬಂದಾಗ ಅವರನ್ನು ಪದೇ, ಪದೇ ಅಲೆಸದೆ ಶೀಘ್ರವಾಗಿ ಕೆಲಸಮಾಡಿ ಕೊಡಿ’ ಎಂದು  ಹೇಳಿದರು. ತಹಶೀಲ್ದಾರ್ ಕೆ.ಸಿ.ಸೌಮ್ಯ, ಗ್ರೇಡ್-2 ತಹಶೀಲ್ದಾರ್ ಸಿ.ಸ್ವಾಮಿ, ಕಂದಾಯ ನಿರೀಕ್ಷಕ ಕೆ.ಎಸ್. ಲೋಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT