ADVERTISEMENT

ತಾಯಿಯಿಂದ ಬೇರ್ಪಟ್ಟು ಅಸ್ವಸ್ಥಗೊಂಡ ಕಾಡಾನೆ ಮರಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 7:59 IST
Last Updated 3 ಅಕ್ಟೋಬರ್ 2020, 7:59 IST
ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ಕಾಡಾನೆ ಮರಿ ಅಸ್ವಸ್ಥಗೊಂಡಿರುವುದು
ಸಕಲೇಶಪುರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ಕಾಡಾನೆ ಮರಿ ಅಸ್ವಸ್ಥಗೊಂಡಿರುವುದು   

ಸಕಲೇಶಪುರ: ಸಮೀಪದ ಮಳಲಿ ಗ್ರಾಮದಲ್ಲಿ ಕಾಡಾನೆ ಮರಿಯೊಂದು ಅಸ್ವಸ್ಥಗೊಂಡಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ, ಮರಿಆನೆಗೆ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಚಪ್ಪರ ಹಾಕಿ ಆಸರೆ ನೀಡಿದ್ದಾರೆ.

‘ಮೂರು ದಿನಗಳ ಹಿಂದೆ ತಾಯಿಆನೆ ಹಾಗೂ ಆನೆ ಹಿಂಡು ಮರಿಯ ಸಮೀಪವೇ ಇದ್ದವು. ಆರೋಗ್ಯದಲ್ಲಿ ಏರುಪೇರು ಆಗಿರುವುದರಿಂದ ಹಾಲು ಕುಡಿಯುವುದಕ್ಕೂ ಆನೆಮರಿಗೆ ಸಾಧ್ಯವಾಗಿಲ್ಲ. ಆನೆಗಳು ಮರಿಯನ್ನು ಬಿಟ್ಟು ಹೋಗಿವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ

ADVERTISEMENT

‘ಆನೆಮರಿಯನ್ನು ಹುಡಿಕಿಕೊಂಡು ತಾಯಿಆನೆ ಪುನಃ ಇಲ್ಲಿಗೆ ಬರುವ ಸಾಧ್ಯತೆ ಇದೆ. ಬರದೆ ಇದ್ದರೆ ಅದನ್ನು ಆನೆಧಾಮಕ್ಕೆ ಸಾಗಿಸಿ ಆರೈಕೆ ಮಾಡಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ರಾಘವೇಂದ್ರ ಅಗಸೆ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.