ADVERTISEMENT

ಮರದ ಕೊಂಬೆ ಬಿದ್ದು ನಿವೃತ್ತ ಸೈನಿಕ ಸಾವು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 15:47 IST
Last Updated 7 ಸೆಪ್ಟೆಂಬರ್ 2020, 15:47 IST
ಆರ.ಎಲ್.ಪಟೇಲ್
ಆರ.ಎಲ್.ಪಟೇಲ್   

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಮರದ ಕೊಂಬೆಯೊಂದು ತಲೆಮೇಲೆ ಬಿದ್ದು ನಿವೃತ್ತ ಸೈನಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಸೋಮವಾರ ಸಂಜೆ ಸಂಭವಿಸಿದೆ.

ಮಂಡ್ಯದ ಆರ್.ಎಲ್.ಪಟೇಲ್ (35) ಮೃತ ವ್ಯಕ್ತಿ. ಸ್ನೇಹಿತರೊಂದಿಗೆ ತಾಲ್ಲೂಕಿನ ಹೋಂ ಸ್ಟೇ ಒಂದಕ್ಕೆ ಭಾನುವಾರ ಬಂದಿದ್ದರು. ಸೋಮವಾರ ಮಂಡ್ಯಕ್ಕೆ ವಾಪಾಸಾಗುತ್ತಿದ್ದರು. ಕಾಫಿ ಪುಡಿ ಖರೀದಿಸಲು ವಾಹನದಿಂದ ಇಳಿದು ಅಂಗಡಿಗೆ ಹೋಗುತ್ತಿದ್ದಾಗ ಒಣಗಿದ್ದ ಕೊಂಬೆ ನೇರವಾಗಿ ತಲೆ ಮೇಲೆ ಬಿದ್ದಿದೆ. ಕೊಂಬೆ ಭಾರೀ ಗಾತ್ರದಲ್ಲಿ ಇದ್ದ ಕಾರಣ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ.

ನೌಷದ್ ಹಾಗೂ ಸ್ನೇಹಿತರು ಅವರ ಆಂಬುಲೆನ್ಸ್‌ನಲ್ಲಿ ಮೃತ ದೇಹವನ್ನು ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ 5 ತಿಂಗಳ ಹಿಂದೆ ನಿವೃತ್ತರಾಗಿದ್ದರು. ಅವರಿಗೆ ಪತ್ನಿ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.