ADVERTISEMENT

ಬೇಲೂರು | ಕೆಎಸ್‌ಆರ್‌ಟಿಸಿ ಬಸ್‌-ಆಲ್ಟೊ ಕಾರು ಅಪಘಾತ: ಐವರು ವಿದ್ಯಾರ್ಥಿಗಳ ಸಾವು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 13:30 IST
Last Updated 22 ಮಾರ್ಚ್ 2022, 13:30 IST
   

ಬೇಲೂರು: ತಾಲ್ಲೂಕಿನ ಸಂಕೇನಹಳ್ಳಿ ಸಮೀಪ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್‌ ಮತ್ತು ಆಲ್ಟೊ ಕಾರು ನಡುವೆ ನಡೆದ ಅಪಘಾತದಲ್ಲಿ ಐವರುವಿದ್ಯಾರ್ಥಿಗಳು ಮೃತಪಟ್ಟರು.

ಬೇಲೂರಿನ ವಿದ್ಯಾವಿಕಾಸ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದಮೊಹಮ್ಮದ್‌ ಜಿಲಾನಿ (19), ಹಸನ್ (20) , ಅಕ್ಮಲ್ ಪಾಷ (19),ಮೊಹಮ್ಮದ್ ಕೈಫ್‌ (20) ಹಾಗೂ ಹಾಸನದ ಎನ್‌ಡಿಆರ್‌ಕೆ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ರಿಹಾನ್‌ ಪಾಷ (21) ಮೃತರು.

ಬೇಲೂರು ನಿವಾಸಿಗಳಾದ ಅವರೆಲ್ಲರೂ ಸ್ನೇಹಿತರು.ಕಾಲೇಜಿನಲ್ಲಿ ಪೂರ್ವಸಿದ್ಧತಾ ಪರೀಕ್ಷೆಗೆ ಹಾಜರಾಗಿ ಹಾಸನದಲ್ಲಿ ಪುಸ್ತಕ ಖರೀದಿಸಲು, ಮಧ್ಯಾಹ್ನ ಕಾರಿನಲ್ಲಿ ಪ್ರಯಾಣಿಸುವಾಗ ಸಂಕೇನಹಳ್ಳಿ ಕ್ರಾಸ್‌ ಬಳಿ, ಮತ್ತೊಂದು ವಾಹನವನ್ನು ಹಿಂದಿಕ್ಕುವ ವೇಳೆ ನಿಯಂತ್ರಣ ತಪ್ಪಿದ ಕಾರು, ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆಯಿತು.

ADVERTISEMENT

ಸ್ಥಳದಲ್ಲೇ ನಾಲ್ವರು ಹಾಗೂ ಆಸ್ಪತ್ರೆಗೆ ಸಾಗಿಸುವಾಗ ಐದನೆಯವರು ಕೊನೆಯುಸಿರೆಳೆದರು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಮೃತದೇಹಗಳನ್ನು ಹೊರಗೆ ತೆಗೆಯಲು ಪೊಲೀಸರು ಹರಸಾಹಸಪಟ್ಟರು. ವಾಹನ ಸಂಚಾರ ಕೆಲ ಕಾಲ ಬಂದ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.