ಆಲೂರು: ಭಾನುವಾರ ಸುರಿದ ಭಾರಿ ಮಳೆಗೆ ಬೆಳ್ಳಾವರ ಗ್ರಾಮದಲ್ಲಿ ಮನೆ ಗೋಡೆ, ಚಾವಣಿ ಕುಸಿದಿದೆ.
ಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ಗುಡುಗು-ಮಿಂಚು ಸಮೇತ ಧಾರಾಕಾರ ಮಳೆ ಅಬ್ಬರಿಸಿತು. ಬೆಳ್ಳಾವರ ಗ್ರಾಮದ ಕೂಲಿ ಕಾರ್ಮಿಕ ಕೃಷ್ಣಯ್ಯ ಅವರ ಮನೆ ಒಂದು ಬದಿ ಗೋಡೆ ಕುಸಿದಿದ್ದು, ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘ಗೋಡೆ ಕುಸಿದ ಕಾರಣ ಟಾರ್ಪಲ್ ಕಟ್ಟಿಕೊಂಡು ದಿನ ದೂಡುವಂತಾಗಿದೆ. ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ಪರಿಹಾರ ನೀಡಬೇಕು’ ಎಂದು ಕೃಷ್ಣಯ್ಯ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.