ADVERTISEMENT

ದೀನ್‌ ದಯಾಳ್‌ರ ಆದರ್ಶ ಮೈಗೂಡಿಸಿಕೊಳ್ಳಿ

ಬಿಜೆಪಿ ಕಾರ್ಯಕರ್ತರಿಗೆ ಶಾಸಕ ಪ್ರೀತಂ ಗೌಡ ಕರೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 16:27 IST
Last Updated 25 ಸೆಪ್ಟೆಂಬರ್ 2021, 16:27 IST
ಹಾಸನದಲ್ಲಿ ಏರ್ಪಡಿಸಿದ್ದ ದೀನ್ ದಿಯಳ್‌ ಉಪಾಧ್ಯಯ ಜಯಂತಿ ಕಾರ್ಯಕ್ರಮವನ್ನು ಶಾಸಕ ಪ್ರೀತಂ ಗೌಡ ಉದ್ಘಾಟಿಸಿದರು. ಮುಖಂಡರಾದ ಪ್ರಸನ್ನ ಕುಮಾರ್‌, ಜನಾರ್ದನ್‌, ವೇಣುಗೋಪಾಲ್‌ ಇದ್ದಾರೆ
ಹಾಸನದಲ್ಲಿ ಏರ್ಪಡಿಸಿದ್ದ ದೀನ್ ದಿಯಳ್‌ ಉಪಾಧ್ಯಯ ಜಯಂತಿ ಕಾರ್ಯಕ್ರಮವನ್ನು ಶಾಸಕ ಪ್ರೀತಂ ಗೌಡ ಉದ್ಘಾಟಿಸಿದರು. ಮುಖಂಡರಾದ ಪ್ರಸನ್ನ ಕುಮಾರ್‌, ಜನಾರ್ದನ್‌, ವೇಣುಗೋಪಾಲ್‌ ಇದ್ದಾರೆ   

ಹಾಸನ: ‘ಶಿಸ್ತಿಗೆ ಹೆಸರಾಗಿದ್ದ ಪಂಡಿತ್‌ ದೀನ ದಯಾಳ್ ಉಪಾಧ್ಯಾಯ ಅವರ ಆದರ್ಶವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು’ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.

ನಗರದ ಜವೇನಹಳ್ಳಿ ಮಠದ ಸಮೀಪ ಶನಿವಾರ ಏರ್ಪಡಿಸಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.‌

‘ದೀನ್‌ ದಯಾಳ್ ಅವರು ಸಾಕಷ್ಟು ಅಧ್ಯಯನ ಮಾಡಿ ಪ್ರಸ್ತುತ ಪಡಿಸಿದ ಏಕಾತ್ಮ ಮಾನವ ತತ್ವವನ್ನು ನಾವು ಬಾಳಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅಧಿಕಾರದಲ್ಲಿರುವವರು ಜನಹಿತದ ಕೆಲಸಗಳನ್ನು ಮಾಡಬೇಕು ಎಂದು ಒತ್ತಿ ಹೇಳಿದರು. ಆಧುನಿಕ ತಂತ್ರಜ್ಞಾನವನ್ನು ಸ್ವಾಗತಿಸಿ, ಭಾರತೀಯ ಅಗತ್ಯಗಳಿಗೆ ತಕ್ಕಂತೆ ಅಳವಡಿಸಿಕೊಳ್ಳಬೇಕೆಂದು ಬಯಸಿದ್ದರು’ ಎಂದು ತಿಳಿಸಿದರು.

ADVERTISEMENT

ನಗರಸಭೆ ಮಾಜಿ ಸದಸ್ಯ ಪ್ರಸನ್ನಕುಮಾರ್ ಮಾತನಾಡಿ, ‘ದೀನ್ ದಯಾಳ್ ಉಪಾಧ್ಯಾಯ ಸ್ವಯಂ ಸೇವಕ ಸಂಘದ ಶಿಕ್ಷಕರಾಗಿ ಅರ್ಹತೆ ಹೊಂದಿದ್ದರೂ ಅವರನ್ನು ಬೋಧನೆಗೆ ನೇಮಿಸಿಕೊಳ್ಳಲಿಲ್ಲ. ಶಿಕ್ಷಕ ವೃತ್ತಿ ಬದಲಾಗಿ ಅವರು 1942ರಿಂದ ಪೂರ್ಣ ಸಮಯದ ಕೆಲಸಕ್ಕೆ ತಮ್ಮನ್ನು ಅರ್ಪಿಸಿಕೊಂಡರು. ಅವರು ಮಾಸಿಕ ಪತ್ರಿಕೆ ‘ರಾಷ್ಟ್ರಧರ್ಮ’, ವಾರಪತ್ರಿಕೆ ‘ಪಾಂಚಜನ್ಯ’ ಆರಂಭಿಸಿದ್ದರು ಎಂದು ಹೇಳಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್ ಮಾತನಾಡಿ, ‘ದೀನ್‌ ದಯಾಳ್‌ ಅವರು ಕಡುಬಡತನದ ಕುಟುಂಬದಲ್ಲಿ ಜನಿಸಿ, ಚಿಕ್ಕಂದಿನಲ್ಲಿಯೇ ಪೋಷಕರನ್ನು ಕಳೆದುಕೊಂಡು ಸೋದರ ಮಾವನ ಆಶ್ರಯದಲ್ಲಿ ಬೆಳೆದು ಶಿಕ್ಷಣ ಪಡೆದರು. ಆರ್‌ಎಸ್ಎಸ್‌ ಸಂಪರ್ಕಕ್ಕೆ ಬಂದ ಬಳಿಕ ಅವರ ಬದುಕಿನ ದಿಕ್ಕೇ ಬದಲಾಯಿತು. ಜಾಗೃತಿ ಹಾಗೂ ಸಂಘಟನೆ ಉದ್ದೇಶದಿಂದ ಬ್ರಹ್ಮಚಾರಿಯಾಗಿಯೇ’
ಇದ್ದರು ಎಂದರು.

ಜನಸಂಘ ಪ್ರಧಾನ ಕಾರ್ಯದರ್ಶಿಯಾಗಿ ದೇಶ ಸುತ್ತಿ ಸಂಘಟನೆಯಲ್ಲಿ ಮಾಡಿದರು. ಅವರ ಆದರ್ಶ ವ್ಯಕ್ತಿತ್ವವನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಅಳವಡಿಸಿಕೊಳ್ಳಬೇಕು.ಯಾವುದೇ ರೀತಿಯ ಅಧಿಕಾರದ ವ್ಯಾಮೋಹಕ್ಕೆ ಒಳಗಾಗದೆ ಸರಳ ರೀತಿಯಲ್ಲಿ ಜೀವನ ನಡೆಸಿದಇವರು ಜನ ಸಂಘದ ಸದಸ್ಯರು ದೇಶದ ಶಕ್ತಿಯಾಗಬೇಕು ಎಂಬ ಪರಿಕಲ್ಪನೆ ಹೊಂದಿದ್ದರು ಎಂದುತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.