ADVERTISEMENT

ಹಾಸನ: ಮದ್ಯ ಮಾರಾಟ ನಿಷೇಧಕ್ಕೆ ಒತ್ತಾಯ

ಕುಟುಂಬಗಳನ್ನು ನರಕಕ್ಕೆ ತಳ್ಳದಿರಲು ಮನವಿ

​ಪ್ರಜಾವಾಣಿ ವಾರ್ತೆ
Published 3 ಮೇ 2020, 15:06 IST
Last Updated 3 ಮೇ 2020, 15:06 IST
ಮದ್ಯ ಮಾರಾಟ ನಿಲ್ಲಿಸಿ ಎಂದು ಒತ್ತಾಯಿಸುತ್ತಲೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ಯೋಗೇಶ್
ಮದ್ಯ ಮಾರಾಟ ನಿಲ್ಲಿಸಿ ಎಂದು ಒತ್ತಾಯಿಸುತ್ತಲೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕ ಯೋಗೇಶ್   

ಆಲೂರು: ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಪಟ್ಟಣದ ನಿವಾಸಿ ಯೋಗೇಶ್‌ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

‘ಮದ್ಯವ್ಯಸನಿಯಾಗಿರುವ ನಾನು, ದಿನಕ್ಕೆ ನಾಲ್ಕು ಕ್ವಾರ್ಟರ್ ಕುಡಿಯುತ್ತಿದ್ದೆ. ಆರೋಗ್ಯಹದಗೆಟ್ಟು, ಮನೆಯಲ್ಲಿ ನಿತ್ಯ ಜಗಳವಾಡುತ್ತಿದೆ. ನೆಮ್ಮದಿಯೇ ಅಳಿಸಿ ಹೋಗಿತ್ತು. ಹೊತ್ತಿನ ಊಟ ಮಾಡಲು ಆಗುತ್ತಿರಲಿಲ್ಲ. ದುಡಿದ ಹಣದಲ್ಲಿ ಶೇ 90 ಕುಡಿಯಲು ಬಳಸುತ್ತಿದ್ದೆ. ಸಂಸಾರವೇ ಹಾಳಾಗಿತ್ತು. ಕೊರೊನಾ ಲಾಕ್‌ಡೌನ್‌ನಿಂದ ಸರ್ಕಾರ ಮದ್ಯ ಮಾರಾಟ ನಿಷೇಧಿಸಿದೆ. ಆರಂಭದಲ್ಲಿಮದ್ಯ ಸಿಗದೆ ಹುಚ್ಚು ಹಿಡಿದಂತೆ ಆಗುತ್ತಿತ್ತು. ಕ್ರಮೇಣ ಪರಿಸ್ಥಿತಿಗೆ ಹೊಂದಿಕೊಂಡೆ’ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಮರ ಪಾಲಿಷ್ ವೃತ್ತಿ ಮಾಡಿಕೊಂಡು ದಿನ ಮನೆಗೆ ಬೇಕಾದ ಆಹಾರ ಪದಾರ್ಥಗಳನ್ನು ವಾರಕ್ಕೆರಡು ಬಾರಿ ಕೊಂಡೊಯ್ಯುತ್ತಿದ್ದೇನೆ. ಮನೆಯಲ್ಲಿ ಮಕ್ಕಳು, ಪತ್ನಿ ಜತೆ ನೆಮ್ಮದಿ ಸಂಸಾರ ನಡೆಸುತ್ತಿದ್ದೇನೆ.ಆರೋಗ್ಯವೂ ಸುಧಾರಿಸಿದೆ. ಮೇ 4ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವಸುದ್ದಿ ಕೇಳಿ ನೋವಾಯಿತು.ಮತ್ತೆಮದ್ಯ ಮಾರಾಟಕ್ಕೆ ಅವಕಾಶ ನೀಡಿ, ಮತ್ತೆ ಕುಟುಂಬಗಳನ್ನು ನರಕಕ್ಕೆ ತಳ್ಳಬೇಡಿ’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.