ಚನ್ನರಾಯಪಟ್ಟಣ: ಪ್ರಿಯಕರನ ಜತೆ ಓಡಿ ಹೋಗುವ ಚಿಂತನೆಯಲ್ಲಿದ್ದಾಗ ಜೋರಾಗಿ ಅಳುತ್ತಿತ್ತುಎಂಬ ಕಾರಣಕ್ಕೆ ಎರಡು ವರ್ಷದ ಕಂದನನ್ನೇ ತಾಯಿ ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾಳೆ.
ತಾಲ್ಲೂಕಿನ ಹುಲ್ಲೇನಹಳ್ಳಿ ಗ್ರಾಮದ ಸುಮಾ ತನ್ನ ಎರಡು ವರ್ಷದ ಪುತ್ರ ತನ್ಮಯ್ನನ್ನು ಕೊಲೆಮಾಡಿದ್ದಾಳೆ. ಜ.19 ರಂದು ಘಟನೆ ನಡೆದಿದ್ದು, ಮಗು ಸಾವಿರ ಕುರಿತು ಅನುಮಾನ ವ್ಯಕ್ತಪಡಿಸಿದ್ದ ಪತಿನಂಜಪ್ಪ ಮರಣೋತ್ತರ ಪರೀಕ್ಷೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಹೂತಿದ್ದ ಶವ ಹೊರ ತೆಗೆದು ಪರೀಕ್ಷೆ ಮಾಡಲಾಗಿತ್ತು.
ಮಗುವಿನ ತಲೆಗೆ ಬಲವಾದ ಏಟು ಬಿದ್ದಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನುವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
‘ಮದುವೆಗೂ ಮೊದಲು ಪ್ರೀತಿಸುತ್ತಿದ್ದ ಯುವಕನೊಂದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದೆ. ಈ ವಿಚಾರ ಪತಿಗೆ ಗೊತ್ತಾಗಿ ಜಗಳ ನಡೆದಿತ್ತು. ಪ್ರಿಯಕರನ ಜತೆ ಹೋಗುವ ಸಲುವಾಗಿ ಯೋಚನೆ ಮಾಡುತ್ತಾ ಕುಳಿತಿದ್ದಾಗ ಮಗು ಜೋರಾಗಿ ಅಳಲು ಶುರು ಮಾಡಿತು. ಸಿಟ್ಟು ತಾಳಲಾರದೆ ಮೂಗು ಹಾಗೂ ಬಾಯಿ ಮುಚ್ಚಿ ಗೋಡೆಗೆ ಗುದ್ದಿ ಕೊಲೆ ಮಾಡಿದೆ’ ಎಂದು ವಿಚಾರಣೆ ವೇಳೆ ಸುಮಾ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.