ADVERTISEMENT

ಹಾಸನ: ನಾಲ್ವರು ನಕಲಿ ವೈದ್ಯರ ಬಂಧನ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 9:06 IST
Last Updated 31 ಮಾರ್ಚ್ 2019, 9:06 IST
   

ಹಾಸನ: ಆಯುರ್ವೇದದ ಹೆಸರಿನಲ್ಲಿ ನಕಲಿ ಗಿಡಮೂಲಿಕೆ ಔಷಧಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ನಕಲಿ ವೈದ್ಯರನ್ನು ಪೆನ್ಷನ್‌ ಮೊಹಲ್ಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಹುಣಸಿನಕೆರೆ ವಲ್ಲಭಾಯಿ ರಸ್ತೆಯಲ್ಲಿ ಕ್ಲಿನಿಕ್‌ ತೆರೆದಿದ್ದ ಧಾರವಾಡ ಜಿಲ್ಲೆ ನವಲಗುಂದದ ಬಷೀರ್, ಬೆಂಗಳೂರಿನ ರಾಮ, ಗಂಗಾಧರ್‌, ವೆಂಕಟೇಶ್‌ ಅವರನ್ನು ಬಂಧಿಸಿ, 10 ಗಿಡ ಮೂಲಿಕೆಗಳ ಬಾಟಲಿ ಹಾಗೂ ನಕಲಿ ಬಿಲ್‌ ಪುಸ್ತಕ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಶ್ರೀಸದ್ವೈದ್ಯ ಆಯುರ್ವೇದ ಹೆಸರಿನಲ್ಲಿ ಕ್ಲಿನಿಕ್ ತೆರೆದು ಜನರಿಗೆ ನಕಲಿ ಔಷಧಗಳನ್ನು ಮಾರಾಟ ಮಾಡಿ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ತಾಲ್ಲೂಕು ವೈದ್ಯಾಧಿಕಾರಿ ಡಾ.ವಿಜಯ್‌ ಅವರು ಠಾಣೆಗೆ ದೂರು ನೀಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.