ಬೆಂಗಳೂರು–ಮಂಗಳೂರು ರೈಲು ಸಂಚಾರ ಆರಂಭ
(ಪ್ರಜಾವಾಣಿ ಚಿತ್ರ)
ಹಾಸನ: ಭೂಕುಸಿತದಿಂದ ಸ್ಥಗಿತವಾಗಿದ್ದ ಬೆಂಗಳೂರು–ಮಂಗಳೂರು ನಡುವಿನ ಪ್ರಯಾಣಿಕ ರೈಲುಗಳ ಸಂಚಾರ ಬುಧವಾರ ಪುನರಾರಂಭವಾಗಿದೆ.
ಜಿಲ್ಲೆಯ ಸಕಲೇಶಪುರ–ಬಾಳ್ಳುಪೇಟೆ ಮಧ್ಯೆ ಆಚಂಗಿ ಬಳಿ ಆಗಸ್ಟ್ 9ರಂದು ಮಧ್ಯರಾತ್ರಿ ಹಳಿಗಳ ಮೇಲೆ ಮಣ್ಣು ಬಿದ್ದು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬುಧವಾರ ಮಧ್ಯಾಹ್ನ ಯಶವಂತಪುರ–ಕಾರವಾರ ರೈಲು ಈ ಮಾರ್ಗದಲ್ಲಿ ಸಂಚರಿಸಿದೆ. ಉಳಿದವು ವೇಳಾಪಟ್ಟಿಯಂತೆ ಸಂಚರಿಸಲಿವೆ. ಸದ್ಯಕ್ಕೆ ಪ್ರಯಾಣಿಕ ರೈಲುಗಳಿಗೆ ಮಾತ್ರ ಅವಕಾಶ ನೀಡಿದ್ದು, 10 ಕಿ.ಮೀ. ವೇಗದಲ್ಲಿ ಸಂಚರಿಸಲು ಸೂಚಿಸಲಾಗಿದೆ.
‘ಸ್ಥಳದಲ್ಲಿ ಇನ್ನಷ್ಟು ಕಾಮಗಾರಿ ಆಗಬೇಕಿದ್ದು, ಪೂರ್ಣಗೊಂಡ ನಂತರ ಗೂಡ್ಸ್ ರೈಲುಗಳ ಸಂಚಾರ ಆರಂಭಿಸಲಾಗುತ್ತದೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.