ADVERTISEMENT

ನಿಯಮ ಉಲ್ಲಂಘನೆ: ರಸ್ತೆಗಿಳಿದು ದಂಡ ವಿಧಿಸಿದ ಎ.ಸಿ

​ಪ್ರಜಾವಾಣಿ ವಾರ್ತೆ
Published 27 ಮೇ 2020, 17:28 IST
Last Updated 27 ಮೇ 2020, 17:28 IST
ಅರಕಲಗೂಡಿನಲ್ಲಿ ಬುಧವಾರ ನಿಯಮ ಪಾಲನೆ ಮಾಡದ್ದರಿಂದ ಅಂಗಡಿಗಳಿಗೆ ಸಕಲೇಶಪುರ ಉಪವಿಭಾಗಾಧಿಕಾರಿ ಎ.ಸಿ ಗಿರೀಶ್ ನಂದನ್ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿದರು
ಅರಕಲಗೂಡಿನಲ್ಲಿ ಬುಧವಾರ ನಿಯಮ ಪಾಲನೆ ಮಾಡದ್ದರಿಂದ ಅಂಗಡಿಗಳಿಗೆ ಸಕಲೇಶಪುರ ಉಪವಿಭಾಗಾಧಿಕಾರಿ ಎ.ಸಿ ಗಿರೀಶ್ ನಂದನ್ ಅಧಿಕಾರಿಗಳೊಂದಿಗೆ ಕಾರ್ಯಾಚರಣೆ ನಡೆಸಿದರು   

ಅರಕಲಗೂಡು: ಪಟ್ಟಣದಲ್ಲಿ ಕೋವಿಡ್ 19 ಮುಂಜಾಗ್ರತಾ ನಿಯಮಗಳನ್ನು ಪಾಲನೆ ಮಾಡದವರ ವಿರುದ್ಧ ಸಕಲೇಶಪುರ ಉಪವಿಭಾಗಾಧಿಕಾರಿಗಳೇ ಖುದ್ದು ಕಾರ್ಯಾಚರಣೆಗಿಳಿದು ದಂಡ ವಿಧಿಸಿದ ಪ್ರಕರಣ ಬುಧವಾರ ನಡೆಯಿತು.

ಕಾರ್ಯ ನಿಮಿತ್ತ ಪಟ್ಟಣಕ್ಕೆ ಬಂದಿದ್ದ ಎ.ಸಿ ಗಿರೀಶ್ ನಂದನ್ ಮಾಸ್ಕ್ ಧರಿಸದೆ ಓಡಾಡುತ್ತಿರುವುದು, ಅಂತರ ಕಾಯ್ದುಕೊಳ್ಳದೆ ವ್ಯಾಪಾರ, ವಹಿವಾಟು ನಡೆಸುತ್ತಿರುವುದನ್ನು ಕಂಡು, ಕೂಡಲೇ ಸ್ಥಳೀಯ ಅಧಿಕಾರಿಗಳನ್ನು ಕರೆಸಿ ತರಾಟೆಗೆ ತೆಗೆದುಕೊಂಡರು. ಬಳಿಕ ತಾವೇ ಕಾರ್ಯಾಚರಣೆಗೆ ಇಳಿದು ಅಂಗಡಿಗಳು, ಮೆಡಿಕಲ್ ಶಾಪ್, ಪೆಟ್ರೋಲ್ ಬಂಕ್‌ಗಳ ಮಾಲಿಕರಿಗೆ ಸೂಕ್ತ ಎಚ್ಚರಿಕೆ ನೀಡಿ ದಂಡ ವಿಧಿಸಿದರು. ಒಟ್ಟು ₹ 15 ಸಾವಿರ ದಂಡ ವಸೂಲಿಯಾಯಿತು.

ತಹಶೀಲ್ದಾರ್ ರೇಣುಕುಮಾರ್, ಮುಖ್ಯಾಧಿಕಾರಿ ಸುರೇಶ್ ಬಾಬು ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.