ADVERTISEMENT

ಆಲೂರು: ಕಾರ್ಜುವಳ್ಳಿ ಮಠದ ಶಂಭುಲಿಂಗ ಸ್ವಾಮೀಜಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 10:29 IST
Last Updated 25 ನವೆಂಬರ್ 2020, 10:29 IST
ಶಂಭುಲಿಂಗ ಸ್ವಾಮೀಜಿ
ಶಂಭುಲಿಂಗ ಸ್ವಾಮೀಜಿ   

ಆಲೂರು: ತಾಲ್ಲೂಕಿನ ಬಾಳೆ ಹೊನ್ನೂರು ಶಾಖಾ ಮಠದ ಕಾರ್ಜುವಳ್ಳಿಯ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ (37) ಅವರು ಮಂಗಳವಾರ ರಾತ್ರಿ ತಮ್ಮ ಕೋಣೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಜುವಳ್ಳಿ ಗ್ರಾಮದಿಂದ ಒಂದು ಕಿ. ಮೀ. ದೂರದಲ್ಲಿ ಮಠ ಇದೆ. 2006 ರಿಂದ ಮಠಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು.

‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿರುವ ಮರಣ ಪತ್ರ ಸಿಕ್ಕಿದೆ.

ADVERTISEMENT

ಕಾರವಾರ ಜಿಲ್ಲೆ ಹಳಿಯಾಳ ಗ್ರಾಮದ ಸಂಗಮೇಶ್ವರ ದೇವರು, ಶಾರದಮ್ಮ ಪುತ್ರರಾದ ಇವರ ಪೂರ್ವಾಶ್ರಮದ ಹೆಸರು ಸತೀಶ್‌ ದೇವರು. 23ನೇ ವಯಸ್ಸಿನಲ್ಲಿ ಮಠಾಧೀಶರಾಗಿ ನೇಮಕ ಮಾಡಲಾಯಿತು.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ತೆಂಕಲಗೂಡು, ಸಂಕಲಾಪುರ, ನೊಣವಿನಕೆರೆ ಮಠಾಧೀಶರ ಸಮ್ಮುಖದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ಮಠದ
ಆವರಣದಲ್ಲಿ ಅಂತ್ಯ್ರಕ್ರಿಯೆ ನೆರವೇರಲಿದೆ. ಶ್ರೀಗಳ ಸಾವಿನ ಸುದ್ದಿ ತಿಳಿದು ಭಕ್ತರು ಆತಂಕ ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.