ADVERTISEMENT

ದೌರ್ಜನ್ಯ, ಅಸ್ಪೃಶ್ಯತೆ ಹೋಗಲಾಡಿಸಲು ಬೀದಿ ನಾಟಕಗಳು ಮಾದರಿ:  ಕೌಸರ್ ಅಹಮದ್

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:03 IST
Last Updated 26 ಡಿಸೆಂಬರ್ 2025, 3:03 IST
ಆಲೂರು ಬಸ್ ನಿಲ್ದಾಣ ಮುಂದೆ ಕಲಾವಿದ ಬಿ.ಟಿ.ಮಾನವ ತಂಡದಿಂದ ದೌರ್ಜನ್ಯ ಮತ್ತು ಅಸ್ಪೃಶ್ಯತೆ ನಿವಾರಣೆ ಬಗ್ಗೆ ಅರಿವು ಮೂಡಿಸುವ ಬೀದಿನಾಟಕವನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ  ಕೌಸರ್ ಅಹಮದ್ ಉದ್ಘಾಟಿಸಿದರು. ಎಎಸ್‌ಐ ನಾಗೇಶ್ ಉಪಸ್ಥಿತರಿದ್ದರು.
ಆಲೂರು ಬಸ್ ನಿಲ್ದಾಣ ಮುಂದೆ ಕಲಾವಿದ ಬಿ.ಟಿ.ಮಾನವ ತಂಡದಿಂದ ದೌರ್ಜನ್ಯ ಮತ್ತು ಅಸ್ಪೃಶ್ಯತೆ ನಿವಾರಣೆ ಬಗ್ಗೆ ಅರಿವು ಮೂಡಿಸುವ ಬೀದಿನಾಟಕವನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ  ಕೌಸರ್ ಅಹಮದ್ ಉದ್ಘಾಟಿಸಿದರು. ಎಎಸ್‌ಐ ನಾಗೇಶ್ ಉಪಸ್ಥಿತರಿದ್ದರು.   

ಆಲೂರು: ಬೀದಿ ನಾಟಕಗಳ ಮೂಲಕ ಸಮಾಜದಲ್ಲಿರುವ ಅಸ್ಪೃಶ್ಯತೆ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೌಸರ್ ಅಹ್ಮದ್ ತಿಳಿಸಿದರು.

ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಕಲಾವಿದ ಬಿ.ಟಿ.ಮಾನವ ತಂಡ ಪ್ರದರ್ಶಿಸಿದ ದೌರ್ಜನ್ಯ ಮತ್ತು ಅಸ್ಪೃಶ್ಯತೆ ನಿವಾರಣೆ ಬಗ್ಗೆ  ಬೀದಿನಾಟಕವನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

 ಜನಾಂದೋಲನದ ರೀತಿಯಲ್ಲಿ ಜಾಗೃತಿ  ಹಮ್ಮಿಕೊಂಡಾಗ ಮಾತ್ರ ಅಸ್ಪೃಶ್ಯತೆ ತೊಲಗಿಸಲು ಸಾಧ್ಯ. ವೈಜ್ಞಾನಿಕ ಮಾನೋಭಾವ ಬೆಳೆಸಿದರೆ ಅಸ್ಪೃಶ್ಯತೆ, ಜಾತಿ ಪದ್ಧತಿ ಹಾಗೂ ತಾರತಮ್ಯ ಹೋಗಲಾಡಿಸಬಹುದು. ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.   ತೊಂದರೆಗೆ ಒಳಗಾದವರ ರಕ್ಷಣೆ ಹಾಗೂ ಸಬಲೀಕರಣಕ್ಕಾಗಿ ಸರ್ಕಾರ ಕಾನೂಸು ಮತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ADVERTISEMENT

‌ ಉದ್ಯೋಗ ಖಾತ್ರಿ ಯೋಜನೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಎ.ಎಸ್.ಐ. ನಾಗೇಶ್, ಪಟ್ಟಣ ಪಂಚಾಯಿತಿ ನಿವೃತ್ತ ನೌಕರ ಮಂಜುನಾಥ್, ಕಲಾವಿದ ಬಿ. ಟಿ. ಮಾನವ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.