ADVERTISEMENT

ಅರಕಲಗೂಡು | ಆಲೂಗೆಡ್ಡೆ ಬೆಳೆಗೆ ಶಿಲೀಂಧ್ರ ನಾಶಕ ಸಿಂಪಡಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 13:59 IST
Last Updated 29 ಜುಲೈ 2024, 13:59 IST
ಅರಕಲಗೂಡು ತಾಲ್ಲೂಕಿನ ಪಿ.ಚಾಕೇನಹಳ್ಳಿಯ ಆಲೂಗೆಡ್ಡೆ ಬೆಳೆ ತಾಕಿಗೆ ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಮಂಗಳಾ ಬೇಟಿ ನೀಡಿ ಪರಿಶೀಲಿಸಿದರು. ಹಿರಿಯ ಸಹಾಯಕ ನಿರ್ದೆಶಕ ಡಿ.ರಾಜೇಶ್, ದೊಡ್ಡಮಗ್ಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಪಲ್ಲವಿ ಪಾಲ್ಗೊಂಡಿದ್ದರು
ಅರಕಲಗೂಡು ತಾಲ್ಲೂಕಿನ ಪಿ.ಚಾಕೇನಹಳ್ಳಿಯ ಆಲೂಗೆಡ್ಡೆ ಬೆಳೆ ತಾಕಿಗೆ ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಮಂಗಳಾ ಬೇಟಿ ನೀಡಿ ಪರಿಶೀಲಿಸಿದರು. ಹಿರಿಯ ಸಹಾಯಕ ನಿರ್ದೆಶಕ ಡಿ.ರಾಜೇಶ್, ದೊಡ್ಡಮಗ್ಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಪಲ್ಲವಿ ಪಾಲ್ಗೊಂಡಿದ್ದರು   

ಅರಕಲಗೂಡು: ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಆಲೂಗೆಡ್ಡೆ ಬೆಳೆಗೆ ಮುಂಜಾಗ್ರತಾ ಕ್ರಮವಾಗಿ ಶಿಲೀಂಧ್ರ ನಾಶಕಗಳನ್ನು ಮಳೆ ಇಲ್ಲದ ಸಮಯದಲ್ಲಿ ಸಿಂಪಡಿಸಬೇಕೆಂದು  ಜಿಲ್ಲಾ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಮಂಗಳಾ ತಿಳಿಸಿದರು.

ತಾಲ್ಲೂಕಿನ ವಿವಿಧ ರೈತರ ಆಲೂಗೆಡ್ಡೆ ತಾಕುಗಳಿಗೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂಗಾಂಶ ಬಾಳೆ ತಾಕಿಗೆ ಇತ್ತೀಚೆಗೆ ಭೇಟಿ ನೀಡಿ ವೀಕ್ಷಿಸಿ ಆಲೂಗಡ್ಡೆ ಬೆಳೆಯ ಮಾಹಿತಿ ಪಡೆದು ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ 650 ರಿಂದ 700 ಹೆಕ್ಟೇರ್ ಜಮೀನಿನಲ್ಲಿ ಆಲೂಗೆಡ್ಡೆ ಬೆಳೆ ಬಿತ್ತನೆ ನಡೆದಿದ್ದು, ಈವರೆಗೂ ಅಂಗಮಾರಿ ರೋಗ ಕಂಡು ಬಂದಿಲ್ಲ ಎಂದರು.

ADVERTISEMENT

ಹಿರಿಯ ಸಹಾಯಕ ನಿರ್ದೆಶಕ ಡಿ.ರಾಜೇಶ್, ದೊಡ್ಡಮಗ್ಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಪಲ್ಲವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.