
ಪ್ರಜಾವಾಣಿ ವಾರ್ತೆ
ಹೆತ್ತೂರು: ಉಚ್ಚಂಗಿ ಗ್ರಾಮದಲ್ಲಿ ಶನಿವಾರ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯುವಲ್ಲಿ ಉರಗ ತಜ್ಞ ಹಾಗೂ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ.
ಗ್ರಾಮದ ಗುಪ್ತ ಎಸ್ಟೇಟ್ನಲ್ಲಿ ಕಾಣಿಸಿಕೊಂಡ ಕಾಳಿಂಗ ಸರ್ಪವನ್ನು ನೋಡಿ ,ಯಸಳೂರು ವಲಯ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಚಂಗಡಿಹಳ್ಳಿ ಗ್ರಾಮದ ಉರಗ ಪ್ರೇಮಿ ರವಿ ಸತತ ಎರಡು ಗಂಟೆ ಪ್ರಯತ್ನದಿಂದ ಸುಮಾರ 16 ಅಡ್ಡಿ ಉದ್ದ, 20 ಕೆ.ಜಿ ತೂಕದ ಹಾವನ್ನು ಹಿಡಿದು ಬಿಸಿಲೆ ರಕ್ಷಿತಾರಣ್ಯಕ್ಕೆ ಬಿಡಲು ನೆರವಾದರು.
ಅರಣ್ಯ ಇಲಾಖೆಯ ಸಿಬ್ಬಂದಿ , ಏಸ್ಟೇಟ್ ಮ್ಯಾನೇಜರ್ ಹಮ್ಮೀದ್, ಹರ್ಷನ್ ದೇವೃಂದ, ಗ್ರಾಮಸ್ಥ ಪುಟ್ಟಸ್ವಾಮಿ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.