ADVERTISEMENT

ಕ್ಯಾಂಟರ್–ಬೈಕ್ ಢಿಕ್ಕಿ: ಸವಾರರು ಸಾವು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 2:32 IST
Last Updated 19 ಸೆಪ್ಟೆಂಬರ್ 2020, 2:32 IST
ಅಪಘಾತದಲ್ಲಿ ಮೃತಪಟ್ಟ ಹರೀಶ್ ಭಾವಚಿತ್ರ.
ಅಪಘಾತದಲ್ಲಿ ಮೃತಪಟ್ಟ ಹರೀಶ್ ಭಾವಚಿತ್ರ.   

ರಾಮನಾಥಪುರ (ಕೊಣನೂರು): ಸಮೀಪದ ತಟ್ಟವಾಳು- ಕೂನನಕೊಪ್ಪಲು ನಡುವಿನ ಬೆಳವಾಡಿ ರಸ್ತೆಯಲ್ಲಿ ಹಾಲಿನ ವಾಹನ ಹಾಗೂ ಬೈಕ್ ನಡುವೆ ಶುಕ್ರವಾರ ಡಿಕ್ಕಿ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.

ಕಸಬಾ ಹೋಬಳಿ ಮರವಳಲು ಗ್ರಾಮದ ಹರೀಶ್ (32), ರಾಮನಾಥಪುರ ಹೋಬಳಿಯ ಗರುಡನಹಳ್ಳಿ ಗ್ರಾಮದ ನಟೇಶ್ (33) ಮೃತಪಟ್ಟವರು.

ಹರೀಶ್ ಮತ್ತು ನಟೇಶ್ ಬಸವಾಪಟ್ಟಣ ಕಡೆಯಿಂದ ಬೆಳವಾಡಿ ಕಡೆಗೆ ತೆರಳುತ್ತಿದ್ದಾಗ ಎದುರಿನಿಂದ ಬಂದ ಹಾಲಿನ ಕ್ಯಾಂಟರ್ ವಾಹನ ಡಿಕ್ಕಿಯಾಗಿದೆ. ಹರೀಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತೀವ್ರ ಗಾಯಗೊಂಡ ನಟೇಶ್‌ ಅವರನ್ನು ಹಾಸನದ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.