ADVERTISEMENT

ಇಂಗಳಗೊಂದಿ ಕಲ್ಲೇಶ್ವರ ಕೆರೆಗೆ ಬಾಗಿನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 6:50 IST
Last Updated 21 ಅಕ್ಟೋಬರ್ 2017, 6:50 IST

ಹಿರೇಕೆರೂರ: ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯಿಂದ ನೀರು ತಂದು ತುಂಬಿಸಿರುವ ತಾಲ್ಲೂಕಿನ ಇಂಗಳಗೊಂದಿ ಗ್ರಾಮದ ಕಲ್ಲೇಶ್ವರ ಕೆರೆಗೆ ಶಾಸಕ ಯು.ಬಿ.ಬಣಕಾರ ಶುಕ್ರವಾರ ಬಾಗಿನ ಅರ್ಪಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಣಕಾರ, ‘ಗ್ರಾಮದಲ್ಲಿ ಸತತ ಬರಗಾಲದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದನ್ನು ಮನಗಂಡು ಜಿಲ್ಲಾ ಪಂಚಾಯ್ತಿ ಅನುದಾನದಲ್ಲಿ 5 ಲಕ್ಷ ಸೇರಿದಂತೆ ಸುಮಾರು 9 ಲಕ್ಷ ವೆಚ್ಚದಲ್ಲಿ 2 .ಕಿ.ಮೀ. ದೂರದ ತುಂಗಾ ಮೇಲ್ದಂಡೆ ಕಾಲುವೆಯಿಂದ ಗ್ರಾಮದ ಕಲ್ಲೇಶ್ವರ ಕೆರೆಗೆ ನೀರು ತರಲಾಗಿದೆ. ಇದರಿಂದ ಜನರ ನೀರಿನ ಬವಣೆ ಇಂಗಲಿದೆ’ ಎಂದರು.

ಅಮೂಲ್ಯವಾಗಿರುವ ನೀರನ್ನು ಅನಗತ್ಯ ಪೋಲು ಮಾಡದೇ ಮಿತವಾಗಿ ಬಳಸಬೇಕು ಎಂದು ಸಲಹೆ ಮಾಡಿದ ಶಾಸಕರು, ಗ್ರಾಮದ ಆಂಜನೇಯ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ಅನುದಾನದಲ್ಲಿ 5 ಲಕ್ಷ ಕೊಡಿಸುವ ಭರವಸೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಮಹೇಶ ಗುಬ್ಬಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಸುಮಿತ್ರಾ ಬಸನಗೌಡ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಗಂಗಮ್ಮ ಹರಿಜನ, ಗುತ್ತಿಗೆದಾರ ರವಿ ಪುಟ್ಟಪ್ಪಗೌಡ್ರ, ಗ್ರಾಮ ಪಂಚಾಯ್ತಿ ಸದಸ್ಯರಾದ ಚೈತ್ರಾ ರಘು ಗಿಡ್ಡಪ್ಪನವರ, ಹನುಮಂತಪ್ಪ ಉಜನೀಪುರ, ಈರಪ್ಪ ಬಣಕಾರ, ರಾಮನಗೌಡ ದಿಗ್ಗಿಗೌಡ್ರ, ಉಜ್ಜನಗೌಡ ದಿಗ್ಗಿಗೌಡ್ರ, ಸಿದ್ದನಗೌಡ ಹಲಗೇರಿ, ಮಾದೇವಪ್ಪ ಅಡಿವೆಣ್ಣನವರ, ಪರಮೇಶಪ್ಪ ಹಿತ್ಲಳ್ಳಿ, ಹನುಮಂತಪ್ಪ ಹಿತ್ಲಳ್ಳಿ, ನಾಗರಾಜ ಹುಚ್ಚಣ್ಣನವರ, ಶ್ರೀನಿವಾಸ ಸಿಂಪಗಿ, ರವಿ ಹೊಗೆಸೊಪ್ಪಿನವರ, ಮಾದೇವಕ್ಕ ಕಡೂರ, ಲತಾ ಕೆಂಚಿಕೊಪ್ಪದ, ಕರಬಸವ್ವ ತಳವಾರ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.