ADVERTISEMENT

ಧರ್ಮ ಆಚರಣೆಗೆ ಸಂಪೂರ್ಣ ಸ್ವತಂತ್ರ್ಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2017, 8:57 IST
Last Updated 28 ಡಿಸೆಂಬರ್ 2017, 8:57 IST

ಸವಣೂರ: ‘ಭಾರತದಲ್ಲಿ ವ್ಯಕ್ತಿ ತನ್ನ ಧರ್ಮದ ಆಚರಣೆಗೆ ಮುಕ್ತ ಸ್ವಾತಂತ್ರ್ಯವಿದೆ’ ಎಂದು ಸಿವಿಲ್‌ ನ್ಯಾಯಾಧೀಶ ಬಾಳಸಾಹೇಬ ವಡವಡೆ ಹೇಳಿದರು.

ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ತಾಲ್ಲೂಕು ವಕೀಲರ ಸಂಘದ ಸಹಯೋಗದಲ್ಲಿ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ನಡೆದ ಮೂಲಭೂತ ಕರ್ತವ್ಯಗಳು, ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಜವಾಬ್ದಾರಿ ಮತ್ತು ಕಾರ್ಮಿಕರಿಗೆ ಇರುವ ಸರ್ಕಾರದ ಸೌಲಭ್ಯಗಳ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಕೀಲರ ಸಂಘದ ಉಪಾಧ್ಯಕ್ಷ ಎಫ್.ಎನ್.ನೆಲ್ಲೂರ, ಎಂ.ಎಂ.ಮುದಗಲ್, ವಕೀಲ ಡಿ.ಎಸ್.ಸಣ್ಣಪೂಜಾರ ಹಾಗೂ ವಕೀಲ ಎಸ್.ಬಿ.ಬಿಷ್ಠನಗೌಡ್ರ ಮಾತನಾಡಿದರು. ಜಿ.ಎಂ.ಮರಿಗೌಡ್ರ ಹಾಗೂ ಕಾರ್ಮಿಕರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.