ಹುಬ್ಬಳ್ಳಿ: ಚಿಕ್ಕಜಾಜೂರು–ಹುಬ್ಬಳ್ಳಿ ಮಧ್ಯೆ ನಿರ್ಮಾಣವಾಗುತ್ತಿರುವ ಜೋಡಿ ರೈಲು ಮಾರ್ಗ ಕಾಮಗಾರಿಗಾಗಿ ನೆಲಕ್ಕುರುಳಬೇಕಿದ್ದ 46 ಮರಗಳನ್ನು ನೈರುತ್ಯ ರೈಲ್ವೆ ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಿದೆ.
ಹಾವೇರಿ ಜಿಲ್ಲೆ ದೇವರಗುಡ್ಡ ರೈಲು ನಿಲ್ದಾಣದ ಸಮೀಪದಲ್ಲಿ ಹಾದು ಹೋಗುವ ಜೋಡಿ ಮಾರ್ಗಕ್ಕಾಗಿ ಹಲವು ಮರಗಳನ್ನು ರೈಲ್ವೆ ಇಲಾಖೆ ತೆರವುಗೊಳಿಸಬೇಕಿತ್ತು. ಆದರೆ, ಜೆಸಿಬಿ ಯಂತ್ರಗಳನ್ನು ಬಳಸಿ ಬೇರುಸಹಿತ ಕಿತ್ತು, ಬೇರೆಡೆ ತಗ್ಗು ತೋಡಿ ನೆಡಲಾಗಿದೆ.
ಜೋಡಿ ಮಾರ್ಗ ನಿರ್ಮಾಣವಾಗುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಈ ಮರಗಳನ್ನು ನೆಡಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ.ವಿಜಯಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.