ADVERTISEMENT

‘ನೇತಾಜಿಯ ಬದುಕು–ಸಾಧನೆ ನಮ್ಮೆಲ್ಲರಿಗೂ ದಾರಿದೀಪ’

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 10:45 IST
Last Updated 26 ಜನವರಿ 2018, 10:45 IST
ಅಕ್ಕಿಆಲೂರಿನ ನೇತಾಜಿ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ನೇತಾಜಿ ಜನ್ಮದಿನ ಆಚರಿಸಲಾಯಿತು
ಅಕ್ಕಿಆಲೂರಿನ ನೇತಾಜಿ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ನೇತಾಜಿ ಜನ್ಮದಿನ ಆಚರಿಸಲಾಯಿತು   

ಅಕ್ಕಿಆಲೂರ: ‘ಯುವಶಕ್ತಿಯನ್ನು ಬಡಿದೆಬ್ಬಿಸಿದ ವೀರ ಸೇನಾನಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಅವರ ಹೆಸರಿನಲ್ಲಿಯೇ ರೋಮಾಂಚನವಿದೆ. ದೇಶಭಕ್ತಿಯ ಪ್ರತೀಕವಾಗಿರುವ ನೇತಾಜಿಯ ಬದುಕು–ಸಾಧನೆ ನಮ್ಮೆಲ್ಲರಿಗೂ ದಾರಿದೀಪವಾಗಿದೆ’ ಎಂದು ಇಲ್ಲಿಯ ನೇತಾಜಿ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಉಪಾಧ್ಯಕ್ಷ ಕೃಷ್ಣ ಈಳಿಗೇರ ಹೇಳಿದರು.

ಇಲ್ಲಿಯ ನೇತಾಜಿ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ನಡೆದ ನೇತಾಜಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೇತಾಜಿ ಅವರ ಹುಮ್ಮಸ್ಸು, ಸ್ವಾತಂತ್ರ್ಯಕ್ಕಾಗಿ ಇದ್ದ ತುಡಿತದ ಫಲವನ್ನು ಇಂದು ನಾವು ಅನುಭವಿಸುತ್ತಿದ್ದವೆ. ಅವರಿಗೆ ಪ್ರತಿಯೊಬ್ಬ ಭಾರತೀಯರು ನಮಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಹಿಂದೂ ಜಾಗರಣಾ ವೇದಿಕೆಯ ಮುಖಂಡ ಶಿವಯೋಗಿ ಪಾಟೀಲ ಮಾತನಾಡಿದರು.

ಬ್ಯಾಂಕ್‌ನ ನಿರ್ದೇಶಕ ವಿಶ್ವನಾಥ ಭಿಕ್ಷಾವರ್ತಿಮಠ, ಸಿಇಒ ಶಂಭು ಹಿರೇಮಠ, ಗಿರೀಶ ಕರಿದ್ಯಾವಣ್ಣನವರ, ನವೀನ ಭಿಕ್ಷಾವರ್ತಿಮಠ, ವಿಶ್ವನಾಥ ಚಿಕ್ಕಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.