ADVERTISEMENT

ಬಸ್‌ ಚಕ್ರಕ್ಕೆ ಸಿಲುಕಿ ಅಂಗನವಾಡಿ ಕಾರ್ಯಕರ್ತೆ ಸಾವು 

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 16:33 IST
Last Updated 14 ಆಗಸ್ಟ್ 2021, 16:33 IST
ಕಮಲಮ್ಮ ನಾರಜ್ಜಿ
ಕಮಲಮ್ಮ ನಾರಜ್ಜಿ   

ರಾಣೆಬೆನ್ನೂರು: ಬೈಕ್‌ನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ಮೃತಪಟ್ಟ ಘಟನೆತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಕಮಲಮ್ಮ ಸೋಮಶೇಖರ ನಾರಜ್ಜಿ (55) ಮೃತಪಟ್ಟವರು.

ಗ್ರಾಮದ ಸಂದೇಶ ನಾಗರಾಜ ಹಳ್ಳೇರ ಎಂಬವರು ಬೈಕ್‌ ವೇಗವಾಗಿ ಚಲಾಯಿಸಿಕೊಂಡು ಹೋಗುವಾಗ ಕುಪ್ಪೇಲೂರು ಕಡೆಯಿಂದ ಬಂದ ಸಾರಿಗೆ ಸಂಸ್ಥೆಯ ಬಸ್‌ ಹಿಂದಿಕ್ಕುವ ಭರದಲ್ಲಿ ನಿಯಂತ್ರಣ ತಪ್ಪಿ ಬೈಕ್‌ ಸಮೇತ ಬಿದ್ದಿದ್ದಾರೆ. ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಕಮಲಮ್ಮ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ವರು.

ADVERTISEMENT

ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಹಲಗೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಗೃಹಿಣಿ ಆತ್ಮಹತ್ಯೆ


ರಾಣೆಬೆನ್ನೂರು: ಇಲ್ಲಿನಪಂಪಾನಗರದ ನಿವಾಸಿ ಪ್ರಿಯಾಂಕಾ ಸ್ವೀವನ್‌ ಮೇಟಿ(22) ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಸ್ಟೀವನ್‌ ಜೊಸೆಫ್‌ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಗಂಡನ ಮನೆಯಲ್ಲಿ ವಾಸವಾಗಿದ್ದರು. ವರದಕ್ಷಿಣೆ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಎಂದು ಮೃತಳ ತಾಯಿ ಲಿಂಗಸಗೂರು ತಾಲ್ಲೂಕಿನ ಬಂಗಾರಹಟ್ಟಿ ಗ್ರಾಮದ ಸುಲೋಚನಾ ದೇವರಾಜ ಬೀರನೂರನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.