ADVERTISEMENT

ಬೇಂದ್ರೆ ವಿಚಾರಧಾರೆ ಅನುಷ್ಠಾನ ಅವಶ್ಯ: ಸಾಹಿತಿ ಶೇಖರಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2023, 15:34 IST
Last Updated 26 ಅಕ್ಟೋಬರ್ 2023, 15:34 IST
ಹಂಸಭಾವಿಯ ಹಾಲೇವಾಡಿಮಠದ ಪ್ರಾರ್ಥನಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ  ದ.ರಾ.ಬೇಂದ್ರೆ   ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಹಂಸಭಾವಿಯ ಹಾಲೇವಾಡಿಮಠದ ಪ್ರಾರ್ಥನಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ  ದ.ರಾ.ಬೇಂದ್ರೆ   ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಹಂಸಭಾವಿ: ಇಲ್ಲಿನ ಹಾಲೇವಾಡಿಮಠದಲ್ಲಿ ಗುರುವಾರ ವರಕವಿ ದ.ರಾ.ಬೇಂದ್ರೆ ಅವರ 43ನೇ  ಪುಣ್ಯ ಸ್ಮರಣೆ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶೇಖರಗೌಡ ಪಾಟೀಲ ಮಾತನಾಡಿ, ಇಂದು  ಯುವ ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಭಾಷೆ ಮತ್ತು ದೇಶ ಪ್ರೇಮದ ಅಭಿಮಾನ ಇಲ್ಲವಾಗಿದ್ದು, ಬೇಂದ್ರೆಯವರ ವಿಚಾರಧಾರೆಗಳ ಅನುಷ್ಠಾನ ಅವಶ್ಯವಾಗಬೇಕು’ ಎಂದರು.

ಡಾ.ಗಂಗಯ್ಯ ಕುಲಕರ್ಣಿ ಮಾತನಾಡಿ, ದ.ರಾ.ಬೇಂದ್ರೆಯವರು ಎಂದೆಂದಿಗೂ ಪ್ರಸ್ತುತ . ಬೇಂದ್ರೆಯವರ ಬರಹದಲ್ಲಿ,ನುಡಿಯಲ್ಲಿ ಹಾಗೂ ಅವರ ಜೀವನ ಶೈಲಿಯಲ್ಲಿ ಗ್ರಾಮೀಣ ಸೊಗಡಿನ ಜನಪದ ಸಂಪದವಿತ್ತು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಮಾತನಾಡಿದರು.

ಬಸವರಾಜ ಪೂಜಾರ, ಮೃತ್ಯುಂಜಯ ಉಜನಿಮಠ, ಜಿ.ಎನ್.ಮಡಿವಾಳರ, ಅನ್ನಪೂರ್ಣ ತಿರಕನಗೌಡ್ರು, ಜ್ಯೋತಿ ಹಾಲೇವಾಡಿಮಠ ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.