ಹಾನಗಲ್:ವಿಜಯದಶಮಿ ಅಂಗವಾಗಿ ಪಟ್ಟಣದಲ್ಲಿ ವಿವಿಧ ದೇವಸ್ಥಾನಗಳ ಪಲ್ಲಕ್ಕಿಗಳ ಮೆರವಣಿಗೆ ಮತ್ತು ಸಿಮೋಲ್ಲಂಘನೆ ಧಾರ್ಮಿಕ ಆಚರಣೆ ನಡೆಯಿತು. ವಿವಿಧ ದೇವರುಗಳ ಪಲ್ಲಕ್ಕಿಗಳೂ ಇಲ್ಲಿನ ಪುರಾತನ ಪ್ರಸಿದ್ಧ ತಾರಕೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದವು.
ಬಳಿಕ ಭಕ್ತರ ಹರ್ಷೋದ್ಭಾರದ ನಡುವೆ ಪಟ್ಟಣ ಹೊರಭಾಗದ ಪಿಳ್ಳನಗಟ್ಟಿ ದೇವಸ್ಥಾನಕ್ಕೆಪಲ್ಲಕ್ಕಿಗಳು ಭೇಟಿ ನೀಡಿದ್ದವು.ಪಿಳ್ಳನಗಟ್ಟಿಯಿಂದ ಮರಳಿದಪಲ್ಲಕ್ಕಿಗಳು ಕೆಲಹೊತ್ತು ಕಲ್ಲಬಾವಿ ಹತ್ತಿರ ನೆಲೆಗೊಂಡಿದ್ದವು. ನಂತರ ಮೂಲದೇವಸ್ಥಾನಗಳಿಗೆ ಪಲ್ಲಕ್ಕಿಗಳು ಮರಳಿದವು.ಪಟ್ಟಣ ಹೊರಭಾಗದ ಮಲ್ಲಿಗಾರ ಗುಡ್ಡದಲ್ಲಿನ ಸಿದ್ದರಾಮೇಶ್ವರ ದೇವಸ್ಥಾನದ ಬನ್ನಿ ಮಂಟಪವನ್ನು ವಿದ್ಯುತ್ ದೀಪಗಳಿಂದಸಿಂಗಾರ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.