ADVERTISEMENT

ಗುತ್ತಲ: ಅತಿವೃಷ್ಟಿ, ದಾಳಿಂಬೆ ಬೆಳೆ ನಾಶ ಮಾಡಿದ ರೈತ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 13:22 IST
Last Updated 4 ಆಗಸ್ಟ್ 2021, 13:22 IST
ನೆಗಳೂರ ಗ್ರಾಮದ ಕೃಷ್ಣರಡ್ಡಿ ಚಪ್ಪರದ ಅವರು ತನ್ನ ಜಮಿನಿನಲ್ಲಿ ದಾಳಿಂಬೆ ಬೆಳೆಯನ್ನು ಜೆಸಿಬಿಯಿಂದ ನಾಶ ಪಡಿಸಿದರು
ನೆಗಳೂರ ಗ್ರಾಮದ ಕೃಷ್ಣರಡ್ಡಿ ಚಪ್ಪರದ ಅವರು ತನ್ನ ಜಮಿನಿನಲ್ಲಿ ದಾಳಿಂಬೆ ಬೆಳೆಯನ್ನು ಜೆಸಿಬಿಯಿಂದ ನಾಶ ಪಡಿಸಿದರು   

ಗುತ್ತಲ:ಇಲ್ಲಿಗೆ ಸಮೀಪದ ನೆಗಳೂರ ಗ್ರಾಮದ ಕೃಷ್ಣರಡ್ಡಿ ಚಪ್ಪರದ ತನ್ನ 5 ಎಕರೆ ಪ್ರದೇಶದಲ್ಲಿ ಬೆಳೆದ ದಾಳಿಂಬೆ ಬೆಳೆಯು ವಿಪರೀತ ಮಳೆ ಸುರಿದ ಹಿನ್ನೆಲೆಯಲ್ಲಿ ರೋಗಕ್ಕೆ ತುತ್ತಾಗಿ ನಾಶವಾಯಿತು.ಹಲವು ಬಾರಿ ಔಷಧಿ ಸಿಂಪಡಿಸಿದರೂ ರೋಗ ಹತೋಟಿಗೆ ಬಾರದ ಕಾರಣ ಕೃಷ್ಣರಡ್ಡಿ ಬೆಳೆಯನ್ನು ಬುಧವಾರಜೆಸಿಬಿ ಮೂಲಕ ನಾಶಪಡಿಸಿದರು.

ನಾಲ್ಕು ವರ್ಷದ ಬೆಳೆ ಇದಾಗಿದ್ದು 2020ರಲ್ಲಿ ₹ 3 ಲಕ್ಷ ಆದಾಯ ಬಂದಿತ್ತು. ಈ ಬಾರಿ 3 ಲಕ್ಷಕ್ಕೂ ಅಧಿಕ ಖರ್ಚು ಮಾಡಲಾಗಿತ್ತು. ಆದರೆ ರೋಗಕ್ಕೆ ತುತ್ತಾಗಿದ್ದರಿಂದ ಬೆಳೆ ನಾಶ ಮಾಡಲಾಯಿತು ಎಂದು ರೈತ ಕೃಷ್ಣರಡ್ಡಿ ಅಳಲು ತೋಡಿಕೊಂಡರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT