ಹಾವೇರಿ:ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳಕ್ಕೆಮಂಗಳವಾರ ಸಾಗಿಸುತ್ತಿದ್ದ 10 ಕೆ.ಜಿ. ಗಾಂಜಾವನ್ನು ವಾಹನ ಸಹಿತ ಜಪ್ತಿ ಮಾಡಿರುವ ಅಬಕಾರಿ ಉಪ ಆಯುಕ್ತ ಆರ್. ನಾಗಶಯನ ನೇತೃತ್ವದ ತಂಡವು, ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಹರಾಷ್ಟ್ರದ ಪುಣೆಯಿಂದ ಖರೀದಿ ಮಾಡಿದ ಗಾಂಜಾವನ್ನು ಧಾರವಾಡದ ನವಲೂರಿನ ಲಕ್ಷ್ಮಣ ಪಾಂಡುರಂಗ ಮಾನೆ ಹಾಗೂ ರಮೇಶ ಮಾರುತಿ ಬೇವೂರ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದರು. ಶಿಶುವಿನಾಳ ಸಮೀಪದ ರಾಮನಕೊಪ್ಪ ಕ್ರಾಸ್ನಲ್ಲಿದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಸೆರೆ ಹಿಡಿದು, ಗಾಂಜಾ ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಗಾಂಜಾದ ಮೊತ್ತ ಸುಮಾರು ₹3 ಲಕ್ಷ ಎಂದು ಅಂದಾಜಿಸಲಾಗಿದೆ.
ಈ ತಂಡದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ ವಿ. ಎ, ಶ್ರೀಶೈಲ ಸಂಗೊಳ್ಳಿ, ಮಹೇಶ್ ಪರೇಟ್, ಸಬ್ ಇನ್ಸ್ಪೆಕ್ಟರ್ಗಳಾದ ದಿವ್ಯಾ, ಎಚ್.ಪಿ.ಮಂಜಯ್ಯ, ಎಲ್.ಬಿ.ಚವ್ಹಾಣ, ಕಾನ್ಸ್ಟೆಬಲ್ ವಿರೂಪಾಕ್ಷ ದೊಡ್ಡಕುಂದರ, ಪಾಟೀಲ ನಾಗನಗೌಡ, ಲಿಂಗಪ್ಪ ವಡ್ನಿಕೊಪ್ಪ, ಬಸವರಾಜ, ರಾಘವೇಂದ್ರ ಮಸಾಲಜಿ, ಯಲ್ಲಪ್ಪ ರಡ್ಡೇರ, ಮಂಜುನಾಥ ಬಸರೀಕಟ್ಟಿ, ವೀರೇಶ ಬೆದವಟ್ಟಿ ಇದ್ದರು ಎಂದು ನಾಗಶಯನ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.