ADVERTISEMENT

‘ಅಮೃತ ಭಾರತ’ ರೈಲು ಆರಂಭ ಶೀಘ್ರ: ಸೋಮಣ್ಣ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:03 IST
Last Updated 11 ಏಪ್ರಿಲ್ 2025, 16:03 IST
ವಿ.ಸೋಮಣ್ಣ
ವಿ.ಸೋಮಣ್ಣ   

ಹಾವೇರಿ: ‘ವಂದೇ ಭಾರತ ಮಾದರಿಯಲ್ಲಿ ಹವಾನಿಯಂತ್ರಣ ರಹಿತ ‘ಅಮೃತ ಭಾರತ’ ರೈಲುಗಳು ಬೆಂಗಳೂರಿನ ಬಿಇಎಲ್‌ನಲ್ಲಿ ತಯಾರಾಗುತ್ತಿದ್ದು, ಶೀಘ್ರವೇ ಹಳಿಗೆ ಇಳಿಯಲಿವೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ ವಂದೇ ಭಾರತ ರೈಲು ನಿಲುಗಡೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಬೆಳಗಾವಿ, ಹಾವೇರಿ, ಹುಬ್ಬಳ್ಳಿ ಮತ್ತು ಇತರೆಡೆ ಅಮೃತ ಭಾರತ ರೈಲು ನಿಲುಗಡೆ ಆಗಲಿದೆ. ಇದು ಎಲ್ಲರಿಗೂ ಮೆಚ್ಚುಗೆ ಆಗಲಿದೆ’ ಎಂದರು.

‘ರಾಜ್ಯದಲ್ಲಿ 2024–25ರಲ್ಲಿ 61 ರೈಲು ನಿಲ್ದಾಣಗಳನ್ನು ಆಧುನೀಕರಣಗೊಳಿಸಲಾಗಿದೆ. 2025–26ರಲ್ಲೂ 61 ನಿಲ್ದಾಣಗಳ ಆಧುನೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣವನ್ನು ₹1,300 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಪಘಾತ ರಹಿತ ಸೇವೆಗಾಗಿ 10 ಸಾವಿರ ಕಿ.ಮೀ.ವರೆಗೂ ಸ್ವದೇಶಿ ನಿರ್ಮಿತ ಕವಚ ನಿರ್ಮಿಸಲಾಗುತ್ತಿದೆ’ ಎಂದರು.

ADVERTISEMENT

‘ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗದ ಡಿಪಿಎಆರ್ ಮುಗಿದಿದ್ದು, ಮುಂದಿನ ಪ್ರಕ್ರಿಯೆಗಳು ನಡೆಯಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.