ADVERTISEMENT

ಅಪಘಾತ: ಹೆಸ್ಕಾಂ ಗುತ್ತಿಗೆದಾರ ಸಾವು

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 3:48 IST
Last Updated 20 ಜನವರಿ 2021, 3:48 IST

ಗುತ್ತಲ: ಟಿಪ್ಪರ್‌ ಮತ್ತು ಬೈಕ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸಮಿಪದ ಹಾವೇರಿ ರಸ್ತೆಯ ಕನವಳ್ಳಿ ಕ್ರಾಸ್ ಹತ್ತಿರ ಮಂಗಳವಾರ ನಡೆದಿದೆ.

ಹೆಸ್ಕಾಂ ಗುತ್ತಿಗೆದಾರ ವೀರನಗೌಡ ಪಾಟೀಲ (30) ಮೃತಪಟ್ಟವರು. ಅವರು ಶಿರಹಟ್ಟಿ ತಾಲ್ಲೂಕಿನ ಹೊಳೆಇಟಗಿ ಗ್ರಾವದವರು ಎಂದು ತಿಳಿದು ಬಂದಿದೆ. ಗುತ್ತಲ ಕಡೆಯಿಂದ ಹಾವೇರಿಗೆ ಹೊರಟಿದ್ದ ಬೈಕ್‌ ಸವಾರನಿಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್‌ ಡಿಕ್ಕಿ ಹೊಡೆದಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT