ADVERTISEMENT

ಶಿವಲಿಂಗ ಸ್ವಾಮಿಗಳ ಜಯಂತಿ ನಾಳೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 13:58 IST
Last Updated 1 ಮಾರ್ಚ್ 2021, 13:58 IST
ಶಿವಲಿಂಗ ಸ್ವಾಮೀಜಿ
ಶಿವಲಿಂಗ ಸ್ವಾಮೀಜಿ   

ಹಾವೇರಿ: ನಗರದ ಹುಕ್ಕೇರಿಮಠದಲ್ಲಿ ಶಿವಲಿಂಗ ಸ್ವಾಮಿಗಳ 104ನೇ ಜಯಂತಿ ಹಾಗೂ ಶಿವಬಸವ ಸ್ವಾಮೀಜಿಗಳ ‘ಬೆಳ್ಳಿ ಮೂರ್ತಿ ಅನಾವರಣ’ ಸಮಾರಂಭವನ್ನು ಮಾರ್ಚ್‌ 3ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.

ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹೊಸರಿತ್ತಿಯ ಗುದ್ಧಲೀಶ್ವರಮಠದ ಗುದ್ಧಲೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಶಿವಕುಮಾರ ಸಂಗೂರ ಪಾಲ್ಗೊಳ್ಳಲಿದ್ದಾರೆ.

ಶಿಕ್ಷಕಿ ರೂಪಾ ಅಶೋಕ ಸಜ್ಜನರ ‘ನುಡಿ ನಮನ’ ಸಲ್ಲಿಸುವರು. ನಿವೃತ್ತ ಮುಖ್ಯಶಿಕ್ಷಕ ಪ್ರಕಾಶಗೌಡ ಆರ್‌.ಭಗವಂತಗೌಡರ ಮತ್ತು ನಿವೃತ್ತ ಶಿಕ್ಷಕ ಸಿದ್ಧನಗೌಡ ಆರ್‌.ಮಾಗನೂರ ಅವರನ್ನು ಸನ್ಮಾನಿಸಲಾಗುವುದು. ಶಿವಶಕ್ತಿ ಪ್ಯಾಲೇಸ್‌ನ ಮಾಲೀಕರಾದ ಕೆ.ಮಂಜಪ್ಪ ಕುಟುಂಬವರ್ಗದಿಂದ ‘ದಾಸೋಹ ಸೇವೆ’ ನಡೆಯಲಿದೆ ಎಂದು ಶ್ರೀಮಠ ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.