ADVERTISEMENT

ಲೋಹಾರ ಜೆಡಿಎಸ್‌ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 9:36 IST
Last Updated 9 ಏಪ್ರಿಲ್ 2018, 9:36 IST

ಆಳಂದ: ಅಖಿಲ ಭಾರತ ಕಾಂಗ್ರೆಸ್‌ ಕಿಸಾನ್ ಘಟಕದ ರಾಜ್ಯ ಕಾರ್ಯದರ್ಶಿ ರಮೇಶ ಲೋಹಾರ ಅವರು ಭಾನುವಾರ ಜೆಡಿಎಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದರು. ಅವರನ್ನು ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಶಾಮರಾವ ಸೂರನ, ತಾಲ್ಲೂಕು ಅಧ್ಯಕ್ಷ ಬಿ.ವಿ.ಚಕ್ರವರ್ತಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.

ಚಕ್ರವರ್ತಿ ಮಾತನಾಡಿ, ‘ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಗುರುಮಠಕಲ್‌ನಲ್ಲಿ ಶನಿವಾರ ಮುಖಂಡ ಲೋಹಾರ ಪಕ್ಷಕ್ಕೆ ಸೇರಿದ್ದಾರೆ. ಲೋಹಾರ ಅವರು ಸಾಮಾಜಿಕ ಹೋರಾಟಗಾರ, ರೈತಪರ ಕಾಳಜಿಯುಳ್ಳ ನಾಯಕರು. ಇವರ ಸೇರ್ಪಡೆಯಿಂದ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹೆಚ್ಚಿನ ಬಲ ಬಂದಿದೆ’ ಎಂದರು.

‘ಈ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಬಿಎಸ್‌ಪಿ ಹೊಂದಾಣಿಕೆಯಿಂದ ರಾಜ್ಯದಲ್ಲಿ ಹೊಸ ಅಲೆ ಮೂಡಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜನಪರ ಆಡಳಿತ ಮತ್ತು ಜೆಡಿಎಸ್‌ ಸಿದ್ಧಾಂತ, ಕಾರ್ಯಕ್ರಮಗಳ ಬಗೆಗೆ ಜನರಲ್ಲಿ ವಿಶ್ವಾಸ ಮೂಡಿದ್ದರಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಲೋಹಾರ ಅವರ ಪತ್ನಿ ಜಿ.ಪಂ ಮತ್ತು ತಾ.ಪಂ ಮಾಜಿ ಸದಸ್ಯರು. ಗುರುಮಠಕಲ್‌ನಲ್ಲಿ ಲೋಹಾರ ಮತ್ತು ಅವರ ಬೆಂಬಲಿಗರ ಸೇರ್ಪಡೆ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಹೊರಟ್ಟಿ, ಬಂಡೆಪ್ಪ ಕಾಶಂಪುರೆ, ಶಾಸಕ ಮಧು ಬಂಗಾರಪ್ಪ, ಪಕ್ಷದ ಉಪಾಧ್ಯಕ್ಷ ಜಾಫರ ಹುಸೇನ, ಆಳಂದ ಕ್ಷೇತ್ರದ ಅಭ್ಯರ್ಥಿ ಸೂರ್ಯಕಾಂತ ಕೊರಳ್ಳಿ ಉಪಸ್ಥಿತರಿದ್ದರು ಎಂದು ತಿಳಿಸಿದರು.

ನೇಮಕ: ಇದೇ ಸಂದರ್ಭದಲ್ಲಿ ಜೆಡಿಎಸ್‌ ಪರಿಶಿಷ್ಟ ಜಾತಿ ಘಟಕದ ತಾಲ್ಲೂಕು ಅಧ್ಯಕ್ಷರಾಗಿ ಬಾಬುರಾವ ಸುಳ್ಳದ ಅವರನ್ನು ನೇಮಕ ಮಾಡಲಾಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ, ಉಪಾಧ್ಯಕ್ಷ ಚಂದ್ರಕಾಂತ ಗದ್ದೆ, ಕಾರ್ಯದರ್ಶಿ ಚಂದ್ರಕಾಂತ ಘೋಡಕೆ, ಬಿಎಸ್‌ಪಿ ಮುಖಂಡ ಅಂಬಾರಾಯ ಬೆಳಮಗಿ, ತಾಲ್ಲೂಕು ಘಟಕದ ಅಧ್ಯಕ್ಷ ರಾಜಕುಮಾರ ಮುದಗಲೆ, ಇಬ್ರಾಹಿಂ ಅನ್ಸಾರಿ, ಶಶಿಕಾಂತ ಸಾವಳೇಶ್ವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.