ADVERTISEMENT

ಸಿಮೆಂಟ್ ಕಾರ್ಖಾನೆಯಲ್ಲಿ ಅವಘಡ: ಐವರು ಕಾರ್ಮಿಕರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 7:06 IST
Last Updated 14 ಡಿಸೆಂಬರ್ 2018, 7:06 IST
ಸೇಡಂ ತಾಲ್ಲೂಕು ಕೋಡ್ಲಾ ಬಳಿಯ ಶ್ರೀ ಸಿಮೆಂಟ್‌ ಕಾರ್ಖಾನೆಯಲ್ಲಿ ಅವಘಡ ಸಂಭವಿಸಿರುವ ಸ್ಥಳ
ಸೇಡಂ ತಾಲ್ಲೂಕು ಕೋಡ್ಲಾ ಬಳಿಯ ಶ್ರೀ ಸಿಮೆಂಟ್‌ ಕಾರ್ಖಾನೆಯಲ್ಲಿ ಅವಘಡ ಸಂಭವಿಸಿರುವ ಸ್ಥಳ   

ಕಲಬುರ್ಗಿ: ಸೇಡಂ ತಾಲ್ಲೂಕು ಕೋಡ್ಲಾ ಬಳಿ ಇರುವ ಶ್ರೀ ಸಿಮೆಂಟ್‌ ಕಾರ್ಖಾನೆಯಲ್ಲಿ ಉಪಕರಣ ಸಾಗಿಸುವ ಬೆಲ್ಟ್‌ನಲ್ಲಿ ಸಿಲುಕಿ ಐವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕಲಬುರ್ಗಿಯ ಯುನೈಟೆಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯ ಬಟಗೇರಾದ ದೇವೀಂದ್ರಪ್ಪ, ಅಳ್ಳೊಳ್ಳಿಯ ಲಕ್ಷ್ಮಣ, ಕೋಡ್ಲಾದ ರವಿಕುಮಾರ, ಬಂಕಲಗಾದ ಮಲ್ಲಪ್ಪ, ರಾಜಸ್ಥಾನದ ಮನೋಜ್‌ ಗಾಯಗೊಂಡ ಕಾರ್ಮಿಕರು.

ADVERTISEMENT

ಆಗಸ್ಟ್‌ 2ರಂದು ಇದೇ ಕಾರ್ಖಾನೆಯಲ್ಲಿ ಕ್ರೇನ್‌ ತುಂಡಾಗಿ ಆರು ಕಾರ್ಮಿಕರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.