ADVERTISEMENT

ಅಪಘಾತ: ಪತ್ರಿಕಾ ವಿತರಕ ಸಾವು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 3:02 IST
Last Updated 1 ಡಿಸೆಂಬರ್ 2020, 3:02 IST
ಕಾಶಿನಾಥಸ್ವಾಮಿ
ಕಾಶಿನಾಥಸ್ವಾಮಿ   

ಕಾಳಗಿ: ತಾಲ್ಲೂಕಿನ ಕಂದಗೂಳ ಗ್ರಾಮದ ‘ಪ್ರಜಾವಾಣಿ’ ಪತ್ರಿಕೆ ವಿತರಕ ಕಾಶಿನಾಥಸ್ವಾಮಿ ಪಂಚಯ್ಯ (55) ಸೋಮವಾರ ನಿಧನರಾಗಿದ್ದಾರೆ.

ನ.26ರಂದು ಬೆಳಿಗ್ಗೆ ಪುತ್ರನ ಬೈಕ್ ಮೇಲೆ ಊರ ಸಮೀಪ ಸಂಚರಿಸುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಕಲಬುರ್ಗಿ ಬಳಿಕ ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಪತ್ರಿಕೆ ಜೊತೆಗೆ ಹಾಲು ವಿತರಣೆಯನ್ನೂ ಮಾಡುತ್ತಿದ್ದರು.

ಸೋಮವಾರ ಶವಪರೀಕ್ಷೆ ನಡೆದು ಸಂಜೆ ಅಂತ್ಯಕ್ರಿಯೆ ನೆರವೇರಿತು. ಪಿಎಸ್ಐ ದಿವ್ಯಾ ಮಹಾದೇವ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.